ನದಿಗೆ ಬಿದ್ದು ಯುವಕ ಮೃತ್ಯು
Update: 2025-10-24 21:12 IST
ಮಲ್ಪೆ, ಅ.24: ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಮನೀಶ ಮಾಂಜ್ಹಿ(38) ಎಂಬವರ ಮೃತದೇಹ ಸೀ ವಾಕ್ ವೇ ಹತ್ತಿರ ಪಾಪನಾಶಿನಿ ನದಿಯಲ್ಲಿ ಗುರುವಾರ ಪತ್ತೆಯಾಗಿದೆ.
ಇವರು ಬೋಟಿಗೆ ರಜೆ ಇದ್ದ ಕಾರಣ ಮೀನುಗಾರಿಕೆ ಕೆಲಸಕ್ಕೆ ಹೋಗದೇ ಇದ್ದು, ಅ.21ರ ಮಧ್ಯಾಹ್ನದಿಂದ ಅ.23ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಆಕಸ್ಮಿಕವಾಗಿ ಅಥವಾ ಇನ್ನಾವೂದೋ ಕಾರಣದಿಂದ ನದಿಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.