×
Ad

ಮೂಡ್ಲಕಟ್ಟೆ: ಸೀನಿಯರ್ ಚೇಂಬರ್ ಯುತ್ ವಿಂಗ್ ಉದ್ಘಾಟನೆ

Update: 2025-10-25 17:44 IST

ಕುಂದಾಪುರ, ಅ.25: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕುಂದಾಪುರ ಲೀಜನ್‌ನ ಯುವ ವಿಭಾಗದ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸೀನಿಯರ್ ಚೇಂಬರ್ ಯುವ ವಿಭಾಗದ ರಾಷ್ಟ್ರೀಯ ಅಧಿಕಾರಿ ಹುಸೇನ್ ಹೈಕಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗ್ಡೆ ಮಾತನಾಡಿದರು. ಉಪ ಪ್ರಾಂಶುಪಾಲ ಡಾ.ಮೆಲ್ವಿನ್ ಡಿಸೋಜ ಯುತ್‌ವಿಂಗ್‌ನ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು.

ಸೀನಿಯರ್ ಛೇಂಬರ್ ಇಂಟರ್‌ನ್ಯಾಶನಲ್ ಕುಂದಾಪುರ ಲೀಜನ್ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ ಪ್ರಾಸ್ತಾವಿಕ ವಾಗಿ ಮಾತನಾಡಿ, ಸ್ವಾಗತಿಸಿದರು. ಯೂತ್ ವಿಂಗ್ ಅಧ್ಯಕ್ಷ ಅನೀಶ್ ಪೂಜಾರಿ, ಕಾರ್ಯದರ್ಶಿ ಆಸ್ಥಿಕ, ಖಜಾಂಚಿ ಲಾವಣ್ಯ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ದೀಪಾವಳಿ ಹಬ್ಬದ ಪ್ರಯುಕ್ತ ನಡೆಸಿದ ಗೂಡುದೀಪ ಸ್ಪರ್ದೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊಫೆಸರ್ ಅಕ್ಷತಾ ನಾಯಕ್, ಯುತ್ ವಿಂಗ್ ಸಂಯೋಜಕ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಸೂಕ್ಷ್ಮ ಅಡಿಗ, ಆಶ ಕುಮಾರಿ, ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಇಶ್ರತ್ ಕಾರ್ಯಕ್ರಮ ನಿರೂಪಿಸಿದರು, ತೃಪ್ತಿ ಅತಿಥಿ ಪರಿಚಯ ನೀಡಿದರು. ಕಿರಣ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News