ಕೇರಳದ ಕಾರ್ಮಿಕ ಆತ್ಮಹತ್ಯೆ
Update: 2026-08-23 20:59 IST
ಹಿರಿಯಡ್ಕ, ಆ.23: ಹಿರಿಯಡ್ಕ ಸಮೀಪ ಬಾವಿ ರಿಂಗ್ ಕೆಲಸ ಮಾಡುತ್ತಿದ್ದ ಕೇರಳ ಕೊಟ್ಟರ ಕೆರೆ ನಿವಾಸಿ ಸಜಿ ಕುಮಾರ್ (53) ಎಂಬವರು ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆ.22ರಂದು ಬೆಳಗ್ಗೆ ರಿಂಗ್ ನಿರ್ಮಾಣ ಮಾಡುವ ಪಕ್ಕದಲ್ಲಿ ಇರುವ ಪಾಳು ಬಿದ್ದ ಹಂಚಿನ ರೈಸ್ ಮಿಲ್ನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.