ಮಲಬಾರ್ ಗೋಲ್ಡ್ನಲ್ಲಿ ಬ್ರೈಡ್ಸ್ ಆಫ್ ಇಂಡಿಯಾ ಶೋ ಅನಾವರಣ
ಉಡುಪಿ, ಡಿ.21: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಬ್ರೈಡ್ಸ್ ಆಫ್ ಇಂಡಿಯಾ ಶೋ ಶನಿವಾರ ಅನಾವರಣ ಗೊಂಡಿತು.
ಈ ಪ್ರದರ್ಶನ ಮತ್ತು ಮಾರಾಟವು ಡಿಸೆಂರ್ಬ 20ರಿಂದ 28ರ ವರೆಗೆ ನಡೆಯಲಿದೆ ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ನ ಗ್ರಾಹಕರಾದ ಬಿಂದು ತಂಗಪ್ಪನ್, ಸ್ವಾತಿ ಮಿಥುನ್, ವಿದ್ಯಾಸರಸ್ವತಿ ಹಾಗೂ ಚರಿಷ್ಮಾ ಶೆಟ್ಟಿ ಆಭರಣಗಳನ್ನು ಅನಾವರಣಗೊಳಿಸಿದರು. ಬಳಿಕ ಬಿಂದು ತಂಗಪ್ಪನ್, ಆಭರಣದ ಗುಣಮಟ್ಟ ಮತ್ತು ವೈಶಿಷ್ಟ್ಯವನ್ನು ಪ್ರಶಂಸಿಸಿದರು.
ಸ್ವಾತಿ ಮಿಥುನ್, ಗ್ರಾಹಕರ ಸೇವೆ ಮತ್ತು ಚಿನ್ನದ ಲೈಟ್ ವೈಟ್ ಆಭರಣ ಗಳ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಚರಿಷ್ಮ ಶೆಟ್ಟಿ ಅಂಟಿಕ್ ಡಿಸೈನ್ ಮತ್ತು ಡೈಮಂಡ್ನ ಸಂಗ್ರಹದ ಬಗ್ಗೆ ಪ್ರಶಂಸಿಸದರು. ರೂಪದರ್ಶಿಗಳಾದ ಶ್ರಾವ್ಯ ಪ್ರವೀಣ, ವೈಷ್ಣವಿ ಶೆಟ್ಟಿ, ಪೂರ್ವಿಕ ಶೆಟ್ಟಿ ರಾಂಪ್ ವಾಕ್ ಮಾಡುವ ಮೂಲಕ ಆಭರಣ ಪ್ರದರ್ಶಿಸಿದರು.
ಸಂದೀಪ್ ಸಫಲ್ಯ ಡೈಮಂಡ್ಸ್ ಪ್ರಿಶಿಯಾ ಮತ್ತು ಆಂಟಿಕ್ ಡಿಸೈನ್ನಲ್ಲಿರುವ ಕರ ಕುಶಲತೆ ಬಗ್ಗೆ ವಿವರಿಸಿದರು ಹಾಗೂ ಚಿನ್ನ, ರತ್ನ, ವಜ್ರಭರಣಗಳ ಮೇಲೆ ಶೇ.30ರವರಗೆ ಕಡಿತಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ವ್ಯವಸ್ಥಾಪಕ ಪುರಂದರ ತಿಂಗಳಾಯ, ಸೇಲ್ಸ್ ಮೆನೇರ್ಜ ಮುಸ್ತಾಫ ಎ.ಕೆ., ದಿವ್ಯ ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.