×
Ad

ಕುಂದಾಪುರ: ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬಾಲಕಿ ಮೃತ್ಯು

Update: 2023-07-24 16:07 IST
ಸಾಂದರ್ಭಿಕ ಚಿತ್ರ

ಅಮಾಸೆಬೈಲು, ಜು.24: ವಿಪರೀತ ಮಳೆಯಿಂದಾಗಿ ಬಾಲಕಿಯೊಬ್ಬಳು ಹೊಳೆಗೆ ಬಿದ್ದು ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ಶೇಡಿಮನೆ ಗ್ರಾಮದ ಬಡಾಬೈಲು ಎಂಬಲ್ಲಿ ನಡೆದಿದೆ.

ಮೃತರನ್ನು ಬಡಾಬೈಲುವಿನ ರಚನಾ(13) ಎಂದು ಗುರುತಿಸಲಾಗಿದೆ. 4ನೇ ತರಗತಿ ಓದಿದ್ದ ಈಕೆ, ನಂತರ ಮಾನಸಿಕ ಸಮಸ್ಯೆಯಿಂದ ಶಾಲೆ ತೊರೆದು ಮನೆಯಲ್ಲಿಯೇ ಇದ್ದಳು. ರವಿವಾರ ತನ್ನ ಅಜ್ಜಿ ಸಾಧಮ್ಮ ಶೆಡ್ತಿ ಜೊತೆ ದನ ಕರುಗಳನ್ನು ಮೇಯಿಸುತ್ತಿರುವಾಗ ಗದ್ದೆಯ ಪಕ್ಕದಲ್ಲಿರುವ ಗಂಗಡಬೈಲು ಹೊಳೆ ಬದಿಗೆ ಹೋದ ರಚನಾ ಆಕಸ್ಮಿಕವಾಗಿ ಕಾಲುಜಾರಿ ಹೊಳೆಗೆ ಬಿದ್ದು ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಳೆನ್ನಲಾಗಿದೆ.

ನಂತರ ಸುಮಾರು 2 ಕಿಲೋ ಮೀಟರ್ ದೂರದ ಶೇಡಿಮನೆ ಗ್ರಾಮದ ಮುಂಡುಬೈಲು ಎಂಬಲ್ಲಿನ ಹೊಳೆನೀರಿನಲ್ಲಿ ರಚನಾಳ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News