×
Ad

ರೈಲಿನಿಂದ ಬಿದ್ದು ಕಾರ್ಮಿಕ ಮೃತ್ಯು

Update: 2024-08-13 22:30 IST

ಗಂಗೊಳ್ಳಿ, ಆ.13: ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಉತ್ತರ ಪ್ರದೇಶ ರಾಜ್ಯದ ಶಿವಮ್ ಸಿಂಗ್(33) ಎಂದು ಗುರುತಿಸಲಾಗಿದೆ. ಇವರು ಕುಂದಾಪುರದ ರೈಲ್ವೆ ನಿಲ್ದಾಣದಿಂದ ಆ.1ರಂದು ರಾತ್ರಿ ರೈಲು ಹತ್ತಿದ್ದು ಸುಮಾರು 30 ನಿಮಿಷ ಚಲಿಸಿದ ಬಳಿಕ ತಾನು ರೈಲು ಬೋಗಿಯ ಡೋರ್‌ನಲ್ಲಿ ತಾಜಾ ಗಾಳಿಯನ್ನು ಸೇವಿಸಲು ನಿಂತಿದ್ದರು.

ಈ ವೇಳೆ ಅವರು ತಲೆಸುತ್ತು ಬಂದು ಕಾಲು ಹಾಗೂ ಕೈ ಜಾರಿ ಆಕಸ್ಮಿಕವಾಗಿ ಆಯಾ ತಪ್ಪಿ ರೈಲಿನಿಂದ ಕೆಳಗೆ ಬಿದ್ದರೆನ್ನಲಾ ಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಆ.13ರಂದು ನಡುರಾತ್ರಿ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News