ಮಣಿಪಾಲ: ಪ್ರವಾಸಿಗರ ತೆಪ್ಪ ಕಳವು
Update: 2023-09-30 12:25 IST
ಮಣಿಪಾಲ, ಸೆ.30: ಶೀಂಬ್ರ-ಪರಾರಿ ಸೇತುವೆ ಕೆಳಗಡೆ ಡಿವೈನ್ ಪ್ಯಾಡಲ್ ಸಂಸ್ಥೆಗೆ ಸೇರಿದ ಪ್ರವಾಸಿಗರನ್ನು ಕೊಂಡೊಯ್ಯುವ ತೆಪ್ಪ (ದೋಣಿ) ಸೆ.26ರಂದು ಕಳವಾಗಿರುವ ಬಗ್ಗೆ ವರದಿಯಾಗಿದೆ.
ಮಣಿಪಾಲದ ಸುತ್ತಮುತ್ತ ಪೂಜಿಸಿದ ಸುಮಾರು 6 ಗಣೇಶ ವಿಗ್ರಹಗಳನ್ನು ಈ ತೆಪ್ಪದಲ್ಲಿಯೇ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಲಾಗಿದೆ. ಈ ಕಾರ್ಯಕ್ರಮ ಮುಗಿದ ನಂತರ ದಡದಲ್ಲಿ ಇರಿಸಿದ್ದ ತೆಪ್ಪವನ್ನು ಕಳವು ಮಾಡಲಾಗಿದೆ ಎಂದು ಸಂಸ್ಥೆಯ ಮಾಲಕರು ದೂರಿದ್ದಾರೆ.