×
Ad

ತುಳುಲಿಪಿ ನಾಮ ಫಲಕ ಅನಾವರಣ

Update: 2023-10-07 19:57 IST

ಮಣಿಪಾಲ, ಅ.7: ಜೈ ತುಲುನಾಡ್ ಉಡುಪಿ ವಲಯದ ವತಿಯಿಂದ ಮಣಿಪಾಲದ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಲಾದ ತುಳು ಲಿಪಿಯ ನಾಮ ಫಲಕವನ್ನು ಉಡುಪಿ ತುಳುಕೂಟ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಇಂದ್ರಾಳಿ ಇಂದು ಅನಾವರಣಗೊಳಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ತಾರಾ ಉಮೇಶ್ ಆಚಾರ್ಯ, ತುಳುನಾಡಧ್ವನಿ ಪತ್ರಿಕೆಯ ಮುಖ್ಯಸ್ಥೆ ಯಶೋಧಾ ಕೇಶವ್, ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ನಾಯ್ಕ್, ಜೈ ತುಲುನಾಡ್ ಉಪಾಧ್ಯಕ್ಷ ಉದಯ್ ಪೂಂಜಾ, ಕೋಶಾಧಿಕಾರಿ ಸಂತೋಷ್ ಎನ್.ಎಸ್., ಉಡುಪಿ ವಲಯದ ಸದಸ್ಯರಾದ ಸುಪ್ರೀತಾ ದೇವಾಡಿಗ, ಕಿರಣ್ ಭಂಡಾರಿ, ರಾಜೇಶ್ ತುಳುವ, ಸುರೇಶ್ ಹಾವಂಜೆ, ಸಾಗರ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಸದಸ್ಯೆ ಸ್ವಾತಿ ಸುವರ್ಣ ಕೊಡವೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News