ಅಂದರ್ ಬಾಹರ್ ಆರೋಪ: ಮೂವರ ಬಂಧನ
Update: 2024-02-03 20:45 IST
ಕಾರ್ಕಳ, ಫೆ.3: ಪಳ್ಳಿ ಶಾಲಾ ಬಳಿ ಫೆ.2ರಂದು ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಮೂವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಲೋಕೇಶ್, ವೇಲು ಮುರುಗನ್, ರಂಗನಾಥ್ ಬಂಧಿತ ಆರೋಪಿಗಳು. ಇವರಿಂದ 5,500ರೂ. ನಗದು ವಶಪಡಿಸಿಕೊಳ್ಳ ಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.