×
Ad

ಕೆರೆಗೆ ಹಾರಿ ವೃದ್ಧ ಆತ್ಮಹತ್ಯೆ

Update: 2024-10-24 21:59 IST

ಹೆಬ್ರಿ: ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದ ಹಿರಿಯರೊಬ್ಬರು ಇದರಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆ ಗೊಂಡು ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಚ್ಚೂರು ಗ್ರಾಮದಿಂದ ವರದಿಯಾಗಿದೆ.

ಶಿವರಾಮ (84) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವಯೋವೃದ್ಧರು. ಅ.22ರಂದು ಹೆಬ್ರಿ ಪೇಟೆಗೆ ಹೋಗಿ ಮದ್ಯಪಾನ ಮಾಡಿಬಂದು ತೋಟ ಕ್ಕೆಂದು ಹೋದವರು ಸಂಜೆಯಾದರೂ ಬಂದಿರಲಿಲ್ಲ. 7ಗಂಟೆಯ ಸುಮಾರಿಗೆ ಅವರಿಗಾಗಿ ಅಕಪಕ್ಕ ಹುಡುಕಾಡಿದಾಗ ಮನೆಯ ಬಳಿಯ ಕೆರೆ ಬದಿ ಅವರ ಬಟ್ಟೆಗಳು ಹಾಗೂ ಕೀಟನಾಶಕ ಬಾಟಲಿ ಪತ್ತೆಯಾಗಿತ್ತು. ಬಳಿಕ ಕೆರೆಯಲ್ಲಿ ಹುಡುಕಿದಾಗ ರಾತ್ರಿ 9ಗಂಟೆ ಸುಮಾರಿಗೆ ಅವರ ಮೃತದೇಹ ಪತ್ತೆಯಾಯಿತು.

ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News