×
Ad

ಅಪಘಾತ: ಗಾಯಾಳು ರಿಕ್ಷಾ ಚಾಲಕ ಮೃತ್ಯು

Update: 2025-02-22 21:01 IST

ಮಣಿಪಾಲ, ಫೆ.22: ಗೂಡ್ಸ್ ರಿಕ್ಷಾ ಸ್ಕಿಡ್ ಆಗಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಉತ್ತಮ್ ಕುಮಾರ್ ವರ್ಮ ಎಂದು ಗುರುತಿಸಲಾಗಿದೆ. ಫೆ.17ರಂದು ಮಣಿಪಾಲದಿಂದ ಇಂಡಸ್ಟ್ರಿಯಲ್ ಏರಿಯಾದ ಕಡೆ ಬರುತ್ತಿದ್ದ ಗೂಡ್ಸ್ ರಿಕ್ಷಾ ಅತೀವೇಗ ಹಾಗೂ ಅಜಾಗರೂಕತೆಯಿಂದ ದಶರಥನಗರದ ಕಮಾನ್ ಬಳಿ ಸ್ಕೀಡ್ ಆಗಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಉತ್ತಮ್ ಕುಮಾರ್ ವರ್ಮ ಚಿಕಿತ್ಸೆ ಫಲಕಾರಿಯಾಗದೆ ಫೆ.22ರಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News