ಬಹುಮಹಡಿ ಕಟ್ಟಡದಿಂದ ಜಿಗಿದು ಯುವಕ ಆತ್ಮಹತ್ಯೆ
Update: 2025-02-25 21:41 IST
ಉಡುಪಿ: ಬಹುಮಹಡಿ ಕಟ್ಟಡದಿಂದ ಜಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ವೇಳೆ ಬ್ರಹ್ಮಗಿರಿ ಸಮೀಪ ನಡೆದಿದೆ.
ಮೃತರನ್ನು ಬ್ರಹ್ಮಗಿರಿ ಬಳಿಯ ನಿವಾಸಿ, ಸುಧೀರ್ ಕುಮಾರ್ ಎಂಬವರ ಮಗ ಲೇಖ ರಾಜ(29) ಎಂದು ಗುರುತಿಸಲಾಗಿದೆ.
ಅವಿವಾಹಿತರಾಗಿದ್ದ ಇವರು ಸುಮಾರು 10 ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಹಿನ್ನೆಲೆಯಲ್ಲಿ ಇವರು ವಾಸವಾಗಿದ್ದ ಅಪಾರ್ಟಮೆಂಟ್ ನ 14 ನೇ ಮಹಡಿಯ ಪ್ಲ್ಯಾಟ್ ನ ರೂಮಿನ ಬಾಲ್ಕಾನಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ