×
Ad

ಉಡುಪಿ ಜಿಲ್ಲೆಯಲ್ಲಿ ದರಖಾಸ್ತು ಪೋಡಿ ಆಂದೋಲನ ಆರಂಭ

Update: 2025-04-22 21:41 IST

ಉಡುಪಿ, ಎ.22: ರಾಜ್ಯ ಸರಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಯಾವುದೇ ಶುಲ್ಕ ಪಾವತಿಸಿಕೊಳ್ಳದೇ ದರಖಾಸ್ತು ಪೋಡಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

ತಹಶೀಲ್ದಾರರ ಕಚೇರಿಯಿಂದ ಅನುಬಂಧ-1ರಂತೆ ದರ್ಖಾಸ್ತು ಮಂಜೂರಿದಾರರ ಮಾಹಿತಿ ಸ್ವೀಕೃತಿಯಾ ದಂತೆ, ಭೂಮಾಪಕರು ಅಳತೆ ಕೆಲಸಕ್ಕೆ ಆಗಮಿಸಲಿದ್ದು, ಸಂಬಂಧಪಟ್ಟ ಮಂಜೂರಿದಾರರು ಭೂಮಾ ಪಕರು ಸ್ಥಳಕ್ಕೆ ಬಂದಾಗ ಕಡ್ಡಾಯವಾಗಿ ಹಾಜರಿದ್ದು, ಮಂಜೂರಾದ ಸ್ಥಳದ ಗಡಿಗಳನ್ನು ತೋರಿಸಿ, ಅಳತೆಯಾದಂತೆ ಗಡಿಗಳಿಗೆ ಗಡಿ ಕಲ್ಲುಗಳನ್ನು ಹಾಕಿಸಲು ಸೂಕ್ತ ಕ್ರಮವಹಿಸುವಂತೆ ಸೂಚಿಸಲಾಗಿದೆ.

ಭೂಮಾಪಕರ ಅಳತೆ ಸಮಯದಲ್ಲಿ ಮಂಜೂರಿದಾರರು ಹಾಜರಿಲ್ಲದೇ ಇದ್ದಲ್ಲಿ ಸ್ಥಳದಲ್ಲಿನ ಮಾಹಿತಿಯಂತೆ ಅಳತೆ ಕೆಲಸ ನಡೆಸಲಾಗುವುದು ಅಥವಾ ದರಖಾಸ್ತು ಮಂಜೂರಾತಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭೂದಾಖಲೆಗಳ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News