×
Ad

ಆದಿ ದ್ರಾವಿಡರು ಉಪಜಾತಿ ನಮೂದಿಸುವುದು ಅನಿವಾರ್ಯ: ಶ್ಯಾಮರಾಜ್ ಬಿರ್ತಿ

Update: 2025-05-04 20:09 IST

ಶ್ಯಾಮರಾಜ್ ಬಿರ್ತಿ

ಉಡುಪಿ, ಮೇ 4: ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆಯಲ್ಲಿ ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರ ಪಡೆದವರು ಅನಿವಾರ್ಯವಾಗಿ ಉಪಜಾತಿಯನ್ನು ಸೂಚಿಸಬೇಕಾದ ತುರ್ತು ಬಂದೊದಗಿದೆ ಎಂದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ 101 ಜಾತಿಗಳ ಪೈಕಿ ಆದಿ ಆಂಧ್ರ, ಆದಿ ಕರ್ನಾಟಕ, ಆದಿದ್ರಾವಿಡ ಈ ಮೂರು ಜಾತಿಗಳನ್ನು ಬಿಟ್ಟು ಉಳಿದ 98 ಜಾತಿಗಳ ಪೈಕಿ ಒಂದನ್ನು ನಮೂದಿಸಬಹುದಾಗಿದೆ. ಉಡುಪಿ ಜಿಲ್ಲೆಯ ಆದಿದ್ರಾವಿಡ ಜಾತಿಯವರು ಜನಗಣತಿಗೆ ಬಂದವರ ಬಳಿ ಜಾತಿ ಆದಿ ದ್ರಾವಿಡ ಎಂದು ಸೂಚಿಸಿ ದಾಗ, ಉಪಜಾತಿಯ ಕಾಲಂ ತೆರೆದು ಕೊಳ್ಳುತ್ತದೆ. ಅಲ್ಲಿ ಉಳಿದ 98 ಜಾತಿಗಳ ಪೈಕಿ ಪಾಣ, ಪರವ, ಪಂಬದ, ಬತ್ತಡ, ಕೂಸ, ದಿಕ್ಕ, ಮುಂಡಾಳ, ಹೀಗೆ ಹಲವಾರು ಉಪಜಾತಿಗಳಿವೆ.

ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ ಆದಿದ್ರಾವಿಡರಿಗೆ ಬಬ್ಬುಸ್ವಾಮಿಯ ಧೈವ ಆರಾಧಕರಿಗೆ ಮುಂಡಾಳ ಎಂಬ ಉಪಜಾತಿಯು ಹೆಚ್ಚು ಸಮರ್ಪಕ ಅನಿಸುತ್ತದೆ. ಒಂದುವೇಳೆ ಉಪಜಾತಿ ಸೂಚಿಸದೇ ಇದ್ದಲ್ಲಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆಯು ಅಪೂರ್ಣವಾಗುತ್ತದೆ. ಮುಂದೊಂದು ದಿನ ಆಯೋಗವು ಮತ್ತೆ ಉಪಜಾತಿಯನ್ನು ಕಡ್ಡಾಯವಾಗಿ ಸೂಚಿಸಲು ತಾಕೀತು ಮಾಡಬಹುದು. ಉಪಜಾತಿ ಸೂಚಿಸದ ವ್ಯಕ್ತಿಯ ಪುನಃ ಸಮೀಕ್ಷೆಗೆ ಸೂಚಿಸ ಬಹುದು.

ಪ್ರತಿಯೊಬ್ಬರೂ ವೈಯಕ್ತಿಕವಾಗಿ ತಮ್ಮ ತಮ್ಮ ಉಪಜಾತಿಯನ್ನು ಸೂಚಿಸಲು ಸ್ವತಂತ್ರರಾಗಿರುತ್ತಾರೆ. ಉಪಜಾತಿಯನ್ನು ನಮೂಧಿಸುವುದು, ಆಯ್ಕೆ ಮಾಡಿ ಕೊಳ್ಳುವುದು ಅವರವರ ಸ್ವಂತಕ್ಕೆ ಬಿಟ್ಟ ವಿಚಾರ ವಾಗಿದೆ. ಆದರೆ ಉಪಜಾತಿ ನಮೂದಿಸದೇ ಇರುವುದು ಸೂಕ್ತವಲ್ಲ. ಈ ಸಮಸ್ಯೆ ಆದಿದ್ರಾವಿಡ ಎಂದು ಜಾತಿ ಪ್ರಮಾಣ ಪತ್ರ ಪಡೆದವರಿಗೆ ಹೆಚ್ಚು ಕಳವಳಕಾರಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News