ಉಡುಪಿಯಲ್ಲಿ ’ನರಸಿಂಹ ಜಯಂತಿ’ ಆಚರಣೆ
ಉಡುಪಿ, ಮೇ 11: ’ನರಸಿಂಹ ಜಯಂತಿ’ಯ ಪ್ರಯುಕ್ತ ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ವಿದುಷಿ ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ ಉಡುಪಿಯ ರಾಜಾಂಗಣದಲ್ಲಿ ನಡೆದ ಭಜನೆ, ಯಕ್ಷಗಾನ, ಹರಿಕಥೆ, ನೃತ್ಯ ರೂಪಕ, ಕುಣಿತ ಭಜನೆ, ಸೆಮಿಕ್ಲಾಸಿಕಲ್ ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್ ಚಾಲನೆ ನೀಡಿದರು.
ಮಠದ ದಿವಾನ ನಾಗರಾಜ ಆಚಾರ್ಯ ನರಸಿಂಹ ಜಯಂತಿ ಆಚರಣೆಯ ಮಹತ್ವವನ್ನು ವಿವರಿಸಿ ಶುಭಾ ಸಂಸನೆಗೈದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕಿ ಹಾಗೂ ಭಜನಾ ತರಬೇತು ದಾರೆ ಉಷಾ ಹೆಬ್ಬಾರ್, ಮಂಜುನಾಥೇಶ್ವರ ಭಜನಾ ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಮಾಜಿ ನಗರಸಭಾ ಸದಸ್ಯ ನರಸಿಂಹ ನಾಯಕ್ ಮಣಿಪಾಲ, ಮಠದ ಪ್ರಮುಖರಾದ ರಘುಪತಿ ರಾವ್, ಕಲಾವಿದರಾದ ರಾಮಕೃಷ್ಣ ಕೊಡಂಚ, ಕಾರ್ತಿಕ್ ಇನ್ನಂಜೆ, ಮುರಳಿ, ಕಾವ್ಯ ಹೆಬ್ಬಾರ್, ಕೌಶಿಕ್ ಹೆಬ್ಬಾರ್, ನಿತ್ಯಾನಂದ ನಾಯಕ್ ಹಾಗೂ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.