ಅತ್ತೂರು ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವದ ನೊವೆನಾ ಪ್ರಾರ್ಥನೆಗೆ ಚಾಲನೆ
ಕಾರ್ಕಳ, ಜ.18: ಸಂತ ಸೆಬಾಸ್ಟಿಯನ್ ಹಬ್ಬದ ಅಂಗವಾಗಿ ಹಾಗೂ ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವ- 2026ರ ಪೂರ್ವಭಾವಿಯಾಗಿ ಅತ್ತೂರು ಸಂತ ಲೋರೆನ್ಸರ ಬಸಿಲಿಕೆಯಲ್ಲಿ ನವದಿನಗಳ ಪ್ರಾರ್ಥನಾ ಮಹೋತ್ಸವಕ್ಕೆ ಭಕ್ತಿಪೂರ್ವಕವಾಗಿ ಚಾಲನೆ ನೀಡಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ-ವೈಸಿಎಸ್ ಯುವ ನಿರ್ದೇಶಕ ವಂದನೀಯ ಸ್ಟೀವನ್ ಫರ್ನಾಂಡಿಸ್ ದೀಪ ಬೆಳಗಿಸುವ ಮೂಲಕ ನವದಿನಗಳ ಪ್ರಾರ್ಥನಾ ಮಹೋತ್ಸವವನ್ನು ಉದ್ಘಾಟಿಸಿದರು. ಈ ಮೂಲಕ ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವದ ಅಂಗವಾಗಿ ನಡೆಯಲಿರುವ ಪೂಜಾ-ಪ್ರಾರ್ಥನಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಆರಂಭಗೊಂಡವು.
ಕಾರ್ಯಕ್ರಮದಲ್ಲಿ ಸಂತ ಲೋರೆನ್ಸರ ಪುಣ್ಯಕ್ಷೇತ್ರದ ಅನೇಕ ಭಕ್ತಾಧಿಗಳು ಭಾಗವಹಿಸಿ ಪ್ರಾರ್ಥನೆಯಲ್ಲಿ ತೊಡಗಿ ದರು. ಈ ಸಂದರ್ಭದಲ್ಲಿ ಅತ್ತೂರು ಸಂತ ಲೋರೆನ್ಸರ ಪುಣ್ಯಕ್ಷೇತ್ರದ ನಿರ್ದೇಶಕ ರೆ.ಫಾ.ಆಲ್ಬನ್ ಡಿಸೋಜ, ಸಹಾಯಕ ಧರ್ಮಗುರು ವಂ.ಫಾ.ರಾಬಿನ್ ಸಾಂತ್ಮಯೆರ್, ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ನಾ, ನೂತನ ಉಪಾಧ್ಯಕ್ಷ ವಂದೀಶ್ ಮತ್ತಾಯಸ್ ಹಾಗೂ ನೂತನ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ಟೆಲಿನೊ ಉಪಸ್ಥಿತರಿದ್ದರು.