×
Ad

ಉಡುಪಿ: ಮೂರು ತಿಂಗಳಲ್ಲಿಯೇ ಕಾಂಕ್ರೀಟ್ ರಸ್ತೆ ಬಿರುಕು!

Update: 2023-07-30 20:24 IST

ಉಡುಪಿ, ಜು.30: ತೆಂಕನಿಡಿಯೂರು ಗ್ರಾಪಂಗೆ ಸಂಬಂಧಪಟ್ಟ ಕಾರ್ತಿಕ್ ಲೇಔಟ್‌ಗೆ ಹೋಗುವ ಕಾಂಕ್ರೀಟ್ ರಸ್ತೆ ನಿರ್ಮಿಸಿದ ಮೂರೇ ತಿಂಗಳಲ್ಲಿ ಬಿರುಕು ಬಿಟ್ಟಿದ್ದು, ಈ ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಗೆ ಮೂರು ತಿಂಗಳ ಹಿಂದೆ ಗ್ರಾಮ ಪಂಚಾಯತ್‌ನಿಂದ ಕಾಂಕ್ರೀಟ್ ಮಾಡಲಾಗಿದ್ದು, ಇದೀಗ ಆ ರಸ್ತೆಯಲ್ಲಿ ಬಿರುಕು ಮತ್ತು ಗುಂಡಿಗಳು ಬಿದ್ದಿವೆ. ಅಲ್ಲದೆ ಹತ್ತಿರ ನೀರು ಹಾದು ಹೋಗುವ ಚರಂಡಿ ಕೂಡ ಇದ್ದು, ಇಲ್ಲಿನ ನೀರು ಗಬ್ಬು ವಾಸನೆ ಬರುತ್ತಿದೆ. ಸೊಳ್ಳೆ ಕಾಟದಿಂದ ನಾಗರಿಕರಿಗೆ ಡೆಂಗ್ಯೂ, ಮಲೇರಿಯಾದಂತ ಕಾಯಿಲೆಯ ಭೀತಿಯಲ್ಲಿ ಇದ್ದಾರೆ. ಆದುದರಿಂದ ಸಂಬಂಧ ಪಟ್ಟರು ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News