×
Ad

ಉಡುಪಿ: ಕೊಲೆ ಪ್ರಕರಣದ ಸಂತ್ರಸ್ತರ ಕುಟುಂಬಕ್ಕೆ ನಮ್ಮ ನಾಡ ಒಕ್ಕೂಟ ಸಾಂತ್ವನ

Update: 2023-11-21 16:04 IST

ಉಡುಪಿ, ನ.21: ತಾಯಿ, ಮಕ್ಕಳ ಹತ್ಯೆ ನಡೆದ ನೇಜಾರಿನ ಮನೆಗೆ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ನೇತೃತ್ವದ ನಿಯೋಗ  ಭೇಟಿ ನೀಡಿ ಕುಟುಂಬ‌ಸ್ಥರಿಗೆ ಸಾಂತ್ವನ ಹೇಳಿದೆ.

ಮನೆಯ ಯಜಮಾನ ನೂರ್ ಮುಹಮ್ಮದ್ ಮತ್ತು ಅವರ ಮಗ ಅಸಾದ್ ಮತ್ತು ಸಂಬಂಧಿಕ ಆಶ್ರಫ್ ಜೊತೆ ನಿಯೋಗ ಚರ್ಚಿಸಿತು.

ಈ ಸಂದರ್ಭದಲ್ಲಿ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ, ಜಿಲ್ಲಾ. ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಇನಾಯತುಲ್ಲ ಶಭಂದ್ರಿ, ಪ್ರಧಾನ ಕಾರ್ಯದರ್ಶಿ ಜಾಹಿರ್ ನಕುದಾ ಗಂಗೊಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಬಿ.ಎಸ್.ಎಫ್.ರಫೀಕ್, ಜಿಲ್ಲಾ ಖಜಾಂಚಿ ನಕ್ವ ಯಾಹ್ಯ, ಜಿಲ್ಲಾ ಸದಸ್ಯರಾದ ಅಬ್ದುಲ್ ರಶೀದ್ ಕಾಪು, ಯು.ಎ.ಲತೀಫ್, ಉಡುಪಿ ತಾಲೂಕು ಅಧ್ಯಕ್ಷ ನಝೀರ್ ನೇಜಾರ್ ಮೊದಲಾದವರು ಉಪಸ್ಥಿತ್ದರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News