×
Ad

ಭಟ್ಕಳ: ಬೋಟ್ ಮಾಲಕನ ಮೊಬೈಲ್ ಫೋನ್ ಹ್ಯಾಕ್‌ ಮಾಡಿ 4.4 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

Update: 2024-05-13 22:01 IST

ಭಟ್ಕಳ: ಸೈಬರ್ ಕಳ್ಳತನದಿಂದ ಮೀನುಗಾರಿಕಾ ಬೋಟ್ ಮಾಲಕರೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ 4.4 ಲಕ್ಷ ಹಣವನ್ನು ಕಳೆದುಕೊಂಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿಯ ಕೇಶವ ಗೋವಿಂದ ಮೊಗೇರ ಎಂಬವರು ದೂರು ನೀಡಿದ್ದು, ಅಪರಿಚಿತ ವ್ಯಕ್ತಿಗಳು ತಮ್ಮ ಬ್ಯಾಂಕ್ ಖಾತೆಯಿಂದ 4.4 ಲಕ್ಷ ರೂ. ಕಬಳಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಮೀನುಗಾರಿಕೆ ವ್ಯವಹಾರ ನಡೆಸುತ್ತಿರುವ ಮೊಗೇರ, ಬಂದರ್‌ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಖಾತೆ ಹೊಂದಿದ್ದರು. ಮೇ 10ರಂದು ಈ ವಂಚನೆ ನಡೆದಿದೆ ಎಂದು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News