×
Ad

ಅಂಕೋಲಾ: ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು

Update: 2024-04-24 19:58 IST

ಅಂಕೋಲಾ : ಟ್ಯಾಕ್ಸ್ ವಾಹನ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಹಟ್ಟಿಕೇರಿ ಬ್ರಿಡ್ಜ್ ಸಮೀಪ ಬುಧವಾರ ನಸುಕಿನ ವೇಳೆಯಲ್ಲಿ ನಡೆದಿದೆ.

ತಾಲೂಕಿನ ಹಾರವಾಡ ಗ್ರಾಪಂ. ವ್ಯಾಪ್ತಿಯ ತರಂಗಮೇಟ್‍ದ ಸುಮಂತ ಯಾದೋಬಾ ಹರಿಕಂತ್ರ (23) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ.

ಸಹ ಸವಾರರಾದ ಹಾರವಾಡ ಸೀಬರ್ಡ್ ಕಾಲೋನಿಯ ಸುಮೀತ ರಾಮಚಂದ್ರ ಹರಿಕಂತ್ರ (22), ತರಂಗಮೇಟ್‍ದ ಚಾಣಕ್ಯ ರಾಮಚಂದ್ರ ಹರಿಕಂತ್ರ (23) ಗಾಯಗೊಂಡಿದ್ದಾರೆ.

ಬೈಕ್ ಸವಾರರು ಬೆಳಂಬಾರದಲ್ಲಿ ಮಂಗಳವಾರ ರಾತ್ರಿ ನಡೆದ ಜಾತ್ರಾ ಉತ್ಸವ ಮುಗಿಸಿ ಬೈಕ್‍ನಲ್ಲಿ ಹಾರವಾಡಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಯಾದೋಬಾ ಲಿಂಗಪ್ಪ ಹರಿಕಂತ್ರ ಪೊಲೀಸ್ ದೂರು ಸಲ್ಲಿಸಿದರು. ಪಿಐ ಶ್ರೀಕಾಂತ ತೋಟಗಿ, ಪಿಎಸ್‍ಐ ಉದ್ದಪ್ಪ ಧರೆಪ್ಪನವರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಪಿಎಸ್‍ಐ ಸುನೀಲ ಹುಲ್ಲೊಳ್ಳಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News