ವಿಕಲಚೇತನರಿಗೆ ಅನುಕಂಪದ ಬದಲಿಗೆ ಅವಕಾಶ ನೀಡಿ : ಶಾಸಕ ಚೆನ್ನಾರೆಡ್ಡಿ ಪಾಟೀಲ್
ಯಾದಗಿರಿ: ವಿಕಲಚೇತನರಿಗೆ ಅನುಕಂಪದ ಬದಲಿಗೆ ಅವಕಾಶ ನೀಡಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದಲ್ಲಿ ಎಪಿಡಿ ಸಂಸ್ಥೆ ಮಂಗಳವಾರ ಹಮ್ಮಿಕೊಂಡಿದ್ದ ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಕಲಚೇತನರಲ್ಲಿ ವಿಶೇಷವಾದ ಜ್ಞಾನವಿರುತ್ತದೆ. ಅವರು ವಿಶೇಷ ವ್ಯಕ್ತಿಗಳಾಗಿರುತ್ತಾರೆ. ಆದರೇ ಅವರನ್ನು ಕಡೆಗಣಿಸಬಾರದೆಂದು ಹೇಳಿದರು.
ಎಪಿಡಿ ಸಂಸ್ಥೆಯವರು ಅನೇಕ ಸೌಲಭ್ಯ ಮತ್ತು ಸವಲತ್ತುಗಳನ್ನು ನೀಡುವ ಮೂಲಕ ಗಿರಿಜಿಲ್ಲೆ ಸೇರಿದಂತೆಯೇ ಅನೇಕ ಕಡೆ ವಿಕಲಚೇತನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಶ್ಲಾಘಿಸಿದರು.
ಸಂಸ್ಥೆಯ ನಿರ್ದೇಶಕ ರಮೇಶ ಗೊಂಗಡಿ ಪ್ರಾಸ್ತಾವಿಕ ಮಾತನಾಡಿ ಸಂಸ್ಥೆ ಉದ್ದೇಶಗಳನ್ನು ವಿವರಿಸಿದರು. ಡಾ.ಕುಮಾರ ಅಂಗಡಿ, ಜಿಲ್ಲಾ ಅಂಗವಿಕಲ ಇಲಾಖೆ ಅಧಿಕಾರಿ ಶರಣಗೌಡ ಪಾಟೀಲ್ ಮಾತನಾಡಿದರು.
51 ವಿಕಲಚೇತನರಿಗೆ ವಾಕರ್, ಸ್ಟಿಕ್, ಸಿಪಿ ಚೇರ್, ಬೈಂಡ್ ಸ್ಟೀಕ್ ಸೇರಿದಂತೆಯೇ ವಿವಿಧ ಸಲಕರಣೆಗಳನ್ನು ಶಾಸಕರು ವಿತರಿಸಿದರು.
ಸಂಸ್ಥೆಯ ವ್ಯವಸ್ಥಾಪಕ ರಮೇಶ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡರಾದ ಸಾಯಿಬಣ್ಣಾ ಕೆಂಗೂರಿ, ಮಲ್ಲಿಕಾರ್ಜುನ ಈಟೆ, ಸಂಸ್ಥೆಯ ಸಿಬ್ಬಂದಿಗಳಾದ ಜ್ಯೋತಿ, ಶರಣಮ್ಮ, ರಮೇಶ, ಶಿಲ್ಪಾ, ಶರಣಪ್ಪ, ಬಸವರಾಜ, ಭೀಮರಾಯ, ಖಂಡಪ್ಪ ಸೇರಿದಂತೆಯೇ ಇತರರಿದ್ದರು.