ಯಾದಗಿರಿ | ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ : ಡಾ.ಭಗವಂತ ಅನವಾರ
ಯಾದಗಿರಿ: ಸಾವಿತ್ರಿಬಾಯಿ ಫುಲೆ ಅವರನ್ನು ಎಷ್ಟು ಬಾರಿ ಸ್ಮರಣೆ ಮಾಡಿದರೂ ಕಡಿಮೆಯೇ. ಹಿಂಸೆ, ಬೆದರಿಕೆ, ಅವಮಾನಗಳನ್ನು ಎದುರಿಸಿದರೂ ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡುವ ಹೋರಾಟವನ್ನು ಅವರು ಎಂದಿಗೂ ನಿಲ್ಲಿಸಲಿಲ್ಲ. ಅದಕ್ಕಾಗಿಯೇ ಸಾವಿತ್ರಿಬಾಯಿ ಫುಲೆ ನಮಗೆ ತಾಯಿ ಸ್ವರೂಪದ ‘ಅಕ್ಷರದ ಅವ್ವ ಆಗಿದ್ದಾರೆ ಎಂದು ನಿವೃತ್ತ ವೈದ್ಯ ಡಾ.ಭಗವಂತ ಅನವಾರ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ 195ನೇ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮಕ್ಕಳು ಶೇಕಡಾ ನೂರರಷ್ಟು ಶಿಕ್ಷಣ ಪಡೆಯಬೇಕು ಎಂಬುದು ನಮ್ಮ ಆಶಯ. ಅದಕ್ಕೆ ಸಾವಿತ್ರಿಬಾಯಿ ಫುಲೆ ಅವರ ಹಾದಿ ಮತ್ತು ಸಿದ್ಧಾಂತಗಳನ್ನು ಅನುಸರಿಸಬೇಕು. ಅವರ ಆದರ್ಶಗಳಲ್ಲಿ ಬೆಳೆದಾಗ ಮಾತ್ರ ನಮ್ಮ ಮಕ್ಕಳಿಗೆ ಸಮಾನತೆ, ಸ್ವಾಭಿಮಾನ ಹಾಗೂ ಭದ್ರ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಂಕರರಾವ್ ಕೊಂಡೆ, ಬಸವರಾಜ ಯಾಳಗಿ, ಮುಖ್ಯ ಶಿಕ್ಷಕ ದೇವೇಂದ್ರಪ್ಪ ಈಟೇ, ಸುರೇಶ ಬೊಮ್ಮನ್, ಕೈಲಾಸ ಅನವಾರ, ಚಂದ್ರಕಾಂತ ಚಲುವಾದಿ, ಆನಂದ್ ಚಟ್ಟೇರಕರ್, ಮಲ್ಲಿಕಾರ್ಜುನ ಹತ್ತಕುಣಿ, ರಮೇಶ್ ಸುಂಗಲಕರ್, ಬಸವರಾಜ ಹುಂಡೆಕಲ್, ಭೀಮಾಶಂಕರ ಕಲ್ಬುರ್ಗಿ, ಮತ್ತು ಮಕ್ಕಳು ಭಾಗವಹಿಸಿದ್ದರು.