ಯಾದಗಿರಿ: ಸಿಡಿಲು ಬಡಿದು ಯುವಕ ಸಾವು
Update: 2025-06-14 00:00 IST
ಸಾಂದರ್ಭಿಕ ಚಿತ್ರ
ಸುರಪುರ: ಸಿಡಿಲು ಬಡಿದು ಕುರಿಗಾಹಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಪೇಠ ಅಮ್ಮಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಾಳ ಅಮ್ಮಾಪೂರ ಗ್ರಾಮದ ಕುರಿಗಾಹಿ ಯುವಕ ಮರೆಪ್ಪ (21) ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸುರಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.