‘ವಾರ್ತಾ ಭಾರತಿ’ ವಾತ್ಸಲ್ಯ, ವಿಶ್ವಾಸ, ವಸ್ತುನಿಷ್ಠ ಪತ್ರಿಕೋದ್ಯಮ: AATA ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್
ವಾರ್ತಾಭಾರತಿಗೆ 24ರ ಸಂಭ್ರಮ
ಫ್ಲೊರಿಡಾ: ವಾತ್ಸಲ್ಯ, ವಿಶ್ವಾಸ ಮತ್ತು ವಸ್ತುನಿಷ್ಠ ಪತ್ರಿಕೋದ್ಯಮದ ಮೂಲಕ 24ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ‘ವಾರ್ತಾ ಭಾರತಿ’ಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.
ನಾಡಿನ ನೆಲ ಜಲದಿಂದ ದೂರವಿದ್ದು, ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಬದುಕು, ಸಾಧನೆ, ಸಂಕಷ್ಟ ಹಾಗೂ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಅವರ ಧ್ವನಿಯಾಗಿ ನಿಂತಿರುವ ‘ವಾರ್ತಾಭಾರತಿ’ಯ ಸೇವೆ ನಿಜಕ್ಕೂ ಶ್ಲಾಘನೀಯ.
ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ತುಳುವರು ಹಾಗೂ ಭಾರತೀಯ ಸಮುದಾಯದ ಉತ್ತಮ ಕಾರ್ಯಗಳು, ಸಾಧನೆಗಳು ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಬೆಳಕಿಗೆ ತರುವ ಮೂಲಕ, ನಮ್ಮ ನೆಲದ ಸಂಸ್ಕೃತಿ, ಭಾಷೆ ಮತ್ತು ಭಾವನೆಗಳನ್ನು ಜಗತ್ತಿನೊಂದಿಗೆ ಬೆಸೆಯುವ ಮಹತ್ವದ ಕಾರ್ಯವನ್ನು ‘ವಾರ್ತಾ ಭಾರತಿ’ ಮಾಡುತ್ತಿದೆ. ವಿಶೇಷವಾಗಿ, ಅನಿವಾಸಿಗಳ ಸಮಸ್ಯೆಗಳಿಗೆ ಧ್ವನಿಯಾಗಿ, ಅವರ ನೋವು ನಲಿವುಗಳಿಗೆ ಸ್ಪಂದಿಸಿ, ಅವರ ಸಾಧನೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಈ ಪತ್ರಿಕೆಯ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ.
All America Tulu Association (AATA)ಯ ಅಧ್ಯಕ್ಷೆಯಾಗಿ, Global Tuluva ಸಂಸ್ಥೆಯ ಸ್ಥಾಪಕಿಯಾಗಿ ಹಾಗೂ Florida Tulu Kootaದ ಸ್ಥಾಪಕಿಯಾಗಿ, ಜಾಗತಿಕ ಮಟ್ಟದಲ್ಲಿ ನಮ್ಮ ಭಾಷೆ, ಸಂಸ್ಕೃತಿ ಮತ್ತು ಸಮುದಾಯವನ್ನು ಬೆಳೆಸುವ ಕಾರ್ಯದಲ್ಲಿ ‘ವಾರ್ತಾ ಭಾರತಿ’ಯಂತಹ ಮಾಧ್ಯಮಗಳ ಬೆಂಬಲ ಮತ್ತು ಪ್ರೋತ್ಸಾಹ ನಮಗೆ ಸದಾ ಅಮೂಲ್ಯವಾಗಿದೆ.
‘ವಾರ್ತಾ ಭಾರತಿ’ ಇನ್ನೂ ಅನೇಕ ವರ್ಷಗಳ ಕಾಲ ಸತ್ಯ, ನ್ಯಾಯ, ಜನಪರ ಕಾಳಜಿ ಮತ್ತು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಮುನ್ನಡೆಯಲಿ. ಅನಿವಾಸಿಗಳ ಧ್ವನಿಯಾಗಿ, ಕನ್ನಡಿಗರ ಹೆಮ್ಮೆಯ ಮಾಧ್ಯಮವಾಗಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ.
24ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ‘ವಾರ್ತಾಭಾರತಿ’ಯ ಸಂಪೂರ್ಣ ಬಳಗಕ್ಕೆ ಹಾರ್ದಿಕ ಶುಭಾಶಯಗಳು.
-ಶ್ರೀವಲ್ಲಿ ರೈ ಮಾರ್ಟೆಲ್, ಅಧ್ಯಕ್ಷೆ, All America Tulu Association (AATA)
ಸ್ಥಾಪಕಿ, Global Alliance of Tulu Associations & Florida Tulu Koota