ʼವಾರ್ತಾಭಾರತಿʼ ಜವಾಬ್ದಾರಿಯುತ ಪತ್ರಿಕೋದ್ಯಮದ ಮೂಲಕ ಜನರ ಧ್ವನಿಯಾಗಿದೆ: NHRSJI ಯುವ ಉಪಾಧ್ಯಕ್ಷ ಇಕ್ರಮ್ ಮೊಹಮ್ಮದ್ ಮೂಳೂರು
ವಾರ್ತಾಭಾರತಿಗೆ 24ರ ಸಂಭ್ರಮ
ಮೂಳೂರು: ಆ. 29ರಂದು 24ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ವಾರ್ತಾಭಾರತಿಗೆ ಹೃತ್ಪೂರ್ವಕ ಶುಭಾಶಯಗಳು. ಕಳೆದ ಹಲವು ವರ್ಷಗಳಿಂದ ವಾರ್ತಾಭಾರತಿ ಜವಾಬ್ದಾರಿಯುತ ಪತ್ರಿಕೋದ್ಯಮದ ಮೂಲಕ ಜನರ ಧ್ವನಿಯಾಗಿ ಮಹತ್ವದ ಪಾತ್ರ ವಹಿಸುತ್ತಿದೆ.
ಸತ್ಯ, ನೇರ ಹಾಗೂ ಜನಪರ ಕಾಳಜಿಯ ಸುದ್ದಿಗಳಿಗೆ ಆದ್ಯತೆ ನೀಡುತ್ತಿರುವ ವಾರ್ತಾಭಾರತಿ, ಮುಂದಿನ ದಿನಗಳಲ್ಲಿಯೂ ಇದೇ ಬದ್ಧತೆಯೊಂದಿಗೆ ಮುನ್ನಡೆಯಲಿ. ಇನ್ನಷ್ಟು ಎತ್ತರಕ್ಕೆ ಬೆಳೆದು, ಸಮಾಜದ ಧ್ವನಿಯನ್ನಾಗಿ ಮುಂದುವರಿದು, ನವಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಲಿ ಎಂದು ಹಾರೈಸುತ್ತೇನೆ.
-ಇಕ್ರಮ್ ಮೊಹಮ್ಮದ್ ಮೂಳೂರು, ರಾಷ್ಟ್ರೀಯ ಯುವ ಉಪಾಧ್ಯಕ್ಷರು, ಅಂತರರಾಷ್ಟ್ರೀಯ ಜಂಟಿ ಕಾರ್ಯದರ್ಶಿ, ನ್ಯಾಷನಲ್ ಹ್ಯೂಮನ್ ರೈಟ್ಸ್ ಸೋಶಿಯಲ್ ಜಸ್ಟಿಸ್ ಆಫ್ ಇಂಡಿಯಾ