ಬೋಳಾರದ ಶಾದಿಮಹಲ್ನಲ್ಲಿ ರಕ್ತದಾನ ಶಿಬಿರ
Update: 2025-08-24 19:27 IST
ಮಂಗಳೂರು: ಮೆಸೇಜ್ ಆಫ್ ಹ್ಯೂಮ್ಯಾನಿಟಿ ಫೋರಮ್ ಮಂಗಳೂರು, ಮಂಗಳೂರು ವೆಲ್ಫೇರ್ ಅಸೋಸಿಯೇಷನ್ (ಶಾದಿಮಹಲ್), ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಸರಕಾರಿ ವೆನ್ಲಾಕ್ ಆಸ್ಪತ್ರೆಗಳ ಸಹಯೋಗದೊಂದಿಗೆ ಬೋಳಾರದ ಶಾದಿಮಹಲ್ನಲ್ಲಿ ರಕ್ತದಾನ ಶಿಬಿರ ಶನಿವಾರ ನಡೆಯಿತು.
ಶಿಬಿರದಲ್ಲಿ 78 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಕೆ. ಅಶ್ರಫ್, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಇಕ್ರಾ ಅರೇಬಿಕ್ ಸ್ಕೂಲ್ನ ಪ್ರಾಂಶುಪಾಲ ಮೌಲಾನಾ ಸಲೀಂ ನದ್ವಿ, ದಾವೂದ್ ಉಸ್ತಾದ್, ಉದಯ ಆಚಾರ್ಯ, ಶಾದಿ ಮಹಲ್ನ ಅಧ್ಯಕ್ಷ ಮಕ್ಬೂಲ್ ಅಹ್ಮದ್ ಮತ್ತು ಉಪಾಧ್ಯಕ್ಷ ಖಲೀಲ್ ಅಹ್ಮದ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.