×
Ad

ಬಜ್ಪೆ| ಕಲುಷಿತಗೊಂಡಿರುವ ಮಳವೂರು ಪಲ್ಗುಣಿ ನದಿ; ನಾಗರಿಕರ ಹಿತರಕ್ಷಣಾ ವೇದಿಕೆ ಆಕ್ರೋಶ

Update: 2026-03-09 22:40 IST

ಬಜ್ಪೆ: ಬೃಹತ್ ಕಾರ್ಖಾನೆಗಳಿಂದ ಕಲುಷಿತಗೊಂಡಿರುವ ಮಳವೂರು ಪಲ್ಗುಣಿ ನದಿಯನ್ನು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ನಿಯೋಗವು ಸೋಮವಾರ ವೀಕ್ಷಿಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಮಳವೂರು ಮೂಲಕ ಹರಿಯುವ ಪಲ್ಗುಣಿ ನದಿಯಲ್ಲಿ ಮೀನುಗಳು ಸಾಯುತ್ತಿದ್ದು, ನೀರಿನಲ್ಲಿ ನೊರೆಗಳು ಹರಡಿದೆ. ದುರ್ನಾಥ ವಿಪರೀತವಾಗಿ ಹರಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ ಆದರೂ ಜಿಲ್ಲಾಡಳಿ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಜೀ ಭಾಗದ ಜನರ ದೌರ್ಭ್ಯಾಗ್ಯ ಎಂದು ನಿಯೋಗವು ಆಕ್ರೋಶ ವ್ಯಕ್ತಪಡಿಸಿದೆ.

ಈ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ಬಹುಗ್ರಾಮ ಕುಡಿಯುವ ಯೋಜನೆಯನ್ನು ಅನುಷ್ಟಾನ ಗೊಳಿಸಲಾಗಿದ್ದು, ಈ ಯೋಜನೆಯಡಿ ಸುತ್ತಲಿನ 10 ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ. ಈ ನೀರು ಜನರ ಗೃಹೋಪಯೋಗಗಳಿಗೆ ಯೋಗ್ಯವೇ ಎನ್ನುವಷ್ಟು ಆತಂಕ ಜೊತೆಗೆ ಅನುಮಾನ ಹುಟ್ಟಿದೆ.

ಡ್ಯಾಮ್ ಪಕ್ಕದವರೆಗೆ ಕಲುಷಿತ ನೀರು ಹರಡಿಕೊಂಡಿದ್ದು, ಡ್ಯಾಮ್ ನ ಒಳಗೆಯೂ ಕೊಳಕು ನೀರು ಸೇರಿರುವ ಆತಂಕವಿದೆ. ಹಾಗಾಗಿ ತಕ್ಷಣ ಜಿಲ್ಲಾಡಳಿಯ ಡ್ಯಾಮ್ ನ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಜೊತೆಗೆ ಕಲುಷಿತ ನೀರು ಜೀವ ನದಿಗೆ ಸೇರುದನ್ನು ತೆರಯಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿರುವ ಬಜ್ಪೆ ನಾಗರಿಕರ ಹಿತ ರಕ್ಷಣಾ ವೇದಿಕೆಯು ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಜನ ಕಾರ್ಯಕ್ಕೆ ಮುಂದಾಗಬೇಕು.‌ ಇಲ್ಲವಾದಲ್ಲಿ ಹತ್ತೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರನ್ನು ಸೇರಿಸಿಕೊಂಡು ಬೃಹತ್ ಮಟ್ಟದ “ ಫಲ್ಗುಣಿ ನದಿ ಬಚಾವೊ” ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಜ್ಪೆ ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಸಿರಾಕ್ ಬಜ್ಪೆ ಅವರಿ ಜಿಲ್ಲಾಡಳಿವನ್ನು ಎಚ್ಚರಿಸಿದ್ದಾರೆ.

ನಿಯೋಗದಲ್ಲಿ ರಾಜ್ಯ ದಲಿತ ಸಂಘದ ಅಧ್ಯಕ್ಷ ಹಾಗೂ ವೇದಿಕೆಯ ಗೌರವಾಧ್ಯಕ್ಷರಾದ ದೇವದಾಸ್, ಹಾಜಿ‌ ಮೋನು, ಹಾಜಿ ಸಲೀಮ್,ಉಪಾಧ್ಯಕ್ಷರಾದ ಇಂಜಿನಿಯರ್ ಇಸ್ಮಾಯಿಲ್, ವಸಂತ್ , ಕಾರ್ಯದರ್ಶಿ ನಿಸಾರ್ ಕರಾವಳಿ, ದಲಿತ ಸಂಘದ ನಾಯಕರಾದ ಮಂಜಪ್ಪ ಪುತ್ರನ್ ಹಿರಿಯರಾದ ಖಾದರ್ ಜರಿ, ಅನ್ವರ್ ರಝಾಕ್ ಮತ್ತು ಕೆಪಿಸಿಸಿ ಸಾಮಾಜಿಕ ಜಾಲತಾಣದ ಹಫೀಝ್ ಕೊಳಂಬೆ ಇದ್ದರು.

"ಈ ವಿಷ ಮಿಶ್ರಿತ ಕೊಳಚೆ ನೀರನ್ನು ಯಾವ ಯಾವ ಕಾರ್ಖಾನೆಗಳಿಂದ ನದಿಗೆ ಬಿಡಲಾಗುತ್ತಿದೆ ಎನ್ನುವ ಕುರಿತು ಸಂಬಂಧಪಟ್ಟ ಇಲಾಖೆ ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಇಷ್ಟು ದೊಡ್ಡ ಅಕ್ರಮ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದೆ. ಜನರ ಜೀವದೊಂದಿಗೆ ಯಾತೂ ಚೆಲ್ಲಾಟವಾ ಡುವುದು ಬೇಡ. ಕಣ್ಣುಮುಚ್ಚಿ ಕುಳಿತಿರುವ ಜನಪ್ರಧಿನಿಧಿಗಳು ಜಿಲ್ಲಾಡಳಿತ ಕಣ್ಣು ತೆರೆಯದಿದ್ದಲ್ಲಿ ನಾಗರಿಕರು ಸೇರಿ ಕಣ್ಣು ತೆರೆಸುವ ಕೆಲಸ ಮಾಡುತ್ತೇವೆ".

-ಸಿರಾಜ್ ಬಜ್ಪೆ, ಅಧ್ಯಕ್ಷರು, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News