ಮೇ 22: ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ
Update: 2025-05-20 19:22 IST
ಮಂಗಳೂರು, ಮೇ 20: ಸುಮಾರು 15 ವರ್ಷದ ಹಿಂದೆ ಅಂದರೆ 2010ರ ಮೇ 22ರಂದು ಬಜ್ಪೆವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಮಡಿದ 158 ಮಂದಿಗೆ ದ.ಕ.ಜಿಲ್ಲಾಡಳಿತದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವು ಮೇ 22ರಂದು ಬೆಳಗ್ಗೆ 9:30ಕ್ಕೆ ಕೂಳೂರು ತಣ್ಣೀರುಬಾವಿ ರಸ್ತೆಯ ಪಾರ್ಕ್ನಲ್ಲಿ ನಡೆಯಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.