ಬೊಳ್ಳೂರು: 41ನೇ ವಾರ್ಷಿಕ ರಿಫಾಯಿ ದಫ್ ರಾತೀಬ್ ಸಮಾರೋಪ
ಹಳೆಯಂಗಡಿ: ಮುಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು, ಲಿಯಾವುಲ್ ಇಸ್ಲಾಂ ದಫ್ ಕಮಿಟಿ ಬೊಳ್ಳೂರು ಇದರ 41ನೇ ವಾರ್ಷಿಕ ರಿಫಾಯಿ ದಫ್ ರಾತೀಬ್ ನೇರ್ಚೆ, ಧಾರ್ಮಿಕ ಮತ ಪ್ರವಚನ ಮತ್ತು ದಫ್ ಸ್ಪರ್ಧಾ ಕಾರ್ಯಕ್ರಮ ಶನಿವಾರ ರಾತ್ರಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರದ ಸದಸ್ಯರಾದ ಶೈಖುನಾ ಎ.ವಿ. ಅಬ್ದುರ್ರಹ್ಮಾನ್ ಮುಸ್ಲಿಯಾರ್ ಉದ್ಘಾಟಿಸಿದರು. ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್ ಹಾಜ್ ಅಝ್ ಹರ್ ಫೈಝಿ ಬೊಳ್ಳೂರು ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್ ನ ಸೈಯ್ಯಿದ್ ಅಬ್ದುಲ್ ರಶೀದಲಿ ಶಿಹಾಬ್ ತಂಙಳ್ ದುವಾಃ ಆಶೀರ್ವಚನ ಗೈದರು.
ಬೊಳ್ಳೂರು ಜುಮಾ ಮಸೀದಿಯ ಮುದರ್ರಿಸ್ ಆರೀಫ್ ಬಾಖವಿ ಕೊಪ್ಪ ಪ್ರಾಸ್ತವಿಕ ಮಾತನಾಡಿದರು. ಬೊಳ್ಳೂರು ದಾರುಲ್ ಉಲೂಮ್ ಮದರಸದ ಸದರ್ ಮುಅಲ್ಲಿಂ ಅಬ್ದುಲ್ ನಾಸಿರ್ ಮುಸ್ಲಿಯಾರ್ ಸ್ವಾಗತ ಭಾಷಣಗೈದರು.
ಸಮಾರಂಭದಲ್ಲಿ ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಪಿ. ಎ. ಅಬ್ದುಲ್ಲಾ ಝನಿ ಬಡಗನ್ನೂರು, ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಆದಂ ಅಮಾನಿ, ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ಲಾ ಮದನಿ ಪಾತೂರು, ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿಯ ಖತೀಬ್ ಅಬೂಬಕರ್ ಮದನಿ ಮುಡಿಪು, ಬೊಳ್ಳೂರು ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಮ್. ಹನೀಫ್ ದಾರಿಮಿ ಅಂಕೋಲ, ಇಂದಿರಾನಗರ ಖಿಲಿರಿಯಾ ಮದರಸದ ಸದರ್ ಮುಅಲ್ಲಿಂ ಇಮ್ರಾನ್ ಮಖ್ದೂಮಿ ಕೃಷ್ಣಾಪುರ, ಬೊಳ್ಳೂರು ದಾರುಲ್ ಉಲೂಮ್ ಮದಸರದ ಸದರ್ ಮುಅಲ್ಲಿಮರಾದ ರಿಯಾಝ್ ಫೈಝಿ ಅಲ್ ಮಹ್ ಬರಿ, ಮುಹಮ್ಮದ್ ಸಾಜಿದ್ ಮನ್ಸೂಮಿ, ಕಾಪಿಕಾಡು ದಾರುಲ್ ಉಲೂಂ ಮದರಸ ಮುಅಲ್ಲಿಂ ಅಬ್ದುರಹ್ಮಾನ್ ಮುಸ್ಲಿಯಾರ್, ಪ್ರಧಾನ ದಫ್ ಉಸ್ತಾದ್ ಹಾಜಿ ಪಿ. ಇಸ್ಮಾಯೀಲ್ ಮುಸ್ಲಿಯಾರ್, ಬೊಳ್ಳೂರು ಜುಮಾ ಮಸೀದಿಯ ಮುಅಝ್ಜಿನ್ ಸೈಫುದ್ದೀನ್ ಅಝ್ ಹರಿ, ಬೊಳ್ಳೂರಿನ ದಫ್ ಉಸ್ತಾದ್ ಗಳಾದ ಕೆ. ಎಚ್. ಹಸನ್ ಮುಸ್ಲಿಯಾರ್, ಹಾಜಿ ಪಂಡಿತ್ ಬಿ. ಎ. ಇದ್ದಿನಬ್ಬ ತೋಡಾರು, ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ವಸಂತ ಬೆರ್ನಾರ್ಡ್, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುಲ್ ಅಝೀಝ್ ಐಎಕೆ, ಎಂ. ಅಬ್ದುಲ್ ಖಾದರ್, ಪಕ್ಷಿಕೆರೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಕೆ. ಯು. ಮುಹಮ್ಮದ್ ನೂರಾನಿಯ, ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಬಿ ಅಬ್ದುಲ್ ರಹಿಮಾನ್ ಕುಡುಂಬೂರು, ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಬಿ.ಎಚ್. ಅಬ್ದುಲ್ ಖಾದರ್ ಎಕೆ ಜಿಲಾನಿ, ಉಪಾಧ್ಯಕ್ಷ ಟಿ. ಎಚ್. ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಹಾಜಿ ಸುಲೈಮಾನ್ ಕೊಪ್ಪಳ, ಜೊತೆ ಕಾರ್ಯದರ್ಶಿ ಬಿ. ಎಂ. ಅಬ್ದುಲ್ ಕರೀಂ ಬೊಳ್ಳೂರು, ಲೆಕ್ಕ ಪರಿಶೋಧಕರಾದ ಬಿ.ಎಂ. ಸುಲೈಮಾನ್ ಇಂದಿರಾನಗರ, ಶೇಖ್ ಅಬ್ದುಲ್ಲಾ ಕಲ್ಲಾಪು, ಲಿಯಾವುಲ್ ಇಸ್ಲಾಂ ದಫ್ ಕಮಿಟಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಇಂದಿರಾನಗರ, ಉಪಾಧ್ಯಕ್ಷ ಬಶೀರ್ ಪರಂಗಿಬೊಟ್ಟು, ಪ್ರಧಾನ ಕಾರ್ಯದರ್ಶಿ ಹುಸೈನಬ್ಬ ಬೊಳ್ಳೂರು, ಜೊತೆ ಕಾರ್ಯದರ್ಶಿ ಬಿ.ಎಂ. ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿ ಅಹಮದ್ ಬಾವ ಮದನಿ, ಲೆಕ್ಕ ಪರಿಶೋಧಕರಾದ ಬಿ. ಅಕ್ಬರ್ ಅಲಿ ಬೊಳ್ಳೂರು ಮೊದಲಾದವರು ಉಪಸ್ಥಿತರಿದ್ದರು. ಮೊಯ್ದೀನ್ ಇಂದಿರಾನಗರ ಕಾರ್ಯಕ್ರಮ ನಿರೂಪಿಸಿದರು. ತ್ವಯ್ಯಿಬ್ ಫೈಝಿ ಧನ್ಯವಾದ ಸಮರ್ಪಿಸಿದರು.