ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 20 ಶಿಕ್ಷಕರು ಆಯ್ಕೆ
ಸೆ. 5ರಂದು ಬೆಳ್ತಂಗಡಿಯಲ್ಲಿ ಪ್ರಶಸ್ತಿ ಪ್ರದಾನ
ಮಂಗಳೂರು, ಸೆ.4: ದ.ಕ.ಜಿಲ್ಲೆಯಲ್ಲಿ 7 ಕಿರಿಯ, 7 ಹಿರಿಯ ಮತ್ತು 6 ಪ್ರೌಢ ಶಾಲೆ ಸೇರಿದಂತೆ 20 ಮಂದಿ ಶಿಕ್ಷಕರು 2025ನೇ ಸಾಲಿನ ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
*ಪ್ರಶಸ್ತಿ ಪ್ರದಾನ: ಸೆ.5ರಂದು ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಸಂತಕಟ್ಟೆ ಇಲ್ಲಿ ನಡೆಯಲಿರುವ ದ.ಕ. ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ -ಶಿಕ್ಷಕ ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ವಿವರ ಇಂತಿವೆ:-
*ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಶಾಲಿನಿ . ಎಚ್.ಕೆ (ಸರಕಾರಿ ಹಿ.ಪ್ರಾ ಶಾಲೆ ಪಾಂಡೇಶ್ವರ -ಮಂಗಳೂರು ಉತ್ತರ ವಲಯ), ವೀಣಾ ಮೇರಿ ರೇಗೊ(ಸಹ ಶಿಕ್ಷಕಿ ಸರಕಾರಿ ಕಿ.ಪ್ರಾ ಶಾಲೆ ತಿಪ್ಲಬೆಟ್ಟು-ಮಂಗಳೂರು ದಕ್ಷಿಣ ), ಉಷಾಲತಾ ಹೆಗಡೆ (ಸರಕಾರಿ ಕಿ.ಪ್ರಾ ಶಾಲೆ ನಡ್ಯೋಡಿ ಮಾರ್ಪಾಡಿ-ಮೂಡಬಿದ್ರೆ), ಶಾಂತಿ ಲೀನಾ (ಮುಖ್ಯ ಶಿಕ್ಷಕಿ ಕಿ.ಪ್ರಾ. ಶಾಲೆ ದೇವಸ್ಯ ಪಡೂರು-ಬಂಟ್ವಾಳ ), ಜಯ .ಕೆ (ಕಿ.ಪ್ರಾ. ಶಾಲೆ ಸುರ್ಯ -ಬೆಳ್ತಂಗಡಿ ), ಜಗನ್ನಾಥ ಕೆ (ದ.ಕ.ಜಿ.ಪಂ . ಕಿ.ಪ್ರಾ. ಶಾಲೆ ಅರೆಲ್ತಡಿ-ಪುತ್ತೂರು ) , ಲಲಿತಾ ಕುಮಾರಿ ಎಸ್(ಸಹ ಶಿಕ್ಷಕಿ ಕಿ.ಪ್ರಾ. ಶಾಲೆ ಬೆಂಡೋಡಿ -ಸುಳ್ಯ).
*ಹಿರಿಯ ಪ್ರಾಥಮಿಕ ಶಾಲಾ ವಿಭಾಗ : ಜಯಲಕ್ಷ್ಮೀ (ದೈ.ಶಿ, ಸ.ಮಾ.ಹಿ.ಪ್ರಾ ಶಾಲೆ ಬೈಕಂಪಾಡಿ ಮೀನಕಳಿಯ -ಮಂಗಳೂರು ಉತ್ತರ), ಚಂದ್ರ ಶೇಖರ ಸಿ.ಎಚ್ ( ಪಿ.ಎಂ.ಶ್ರೀ ಸ.ಹಿ.ಪ್ರಾ.ಶಾಲೆ ಉಚ್ಚಿಲಗುಡ್ಡ ಸೋಮೇಶ್ವರ -ಮಂಗಳೂರು ದಕ್ಷಿಣ), ಹರೀಶ್ ಕೆ.ಎಂ( ಮು.ಶಿ, ಸ.ಹಿ.ಪ್ರಾ.ಶಾಲೆ ನೆಲ್ಲಿಕಾರು ಮೂಡಬಿದ್ರೆ ), ಬಾಬು ನಾಯ್ಕ ಬಿ (ಸರಕಾರಿ ಹಿ.ಪ್ರಾ ಶಾಲೆ ನೀರ್ಕಜೆ ಕೇಪು-ಬಂಟ್ವಾಳ), ಆರತಿ ಕುಮಾರಿ (ದೈ.ಶಿ.ಶಿ, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ನಿಟ್ಟಡೆ -ಬೆಳ್ತಂಗಡಿ), ತಾರಾನಾಥ (ಪಿ.ಎಂ .ಶ್ರೀ ಸ.ಹಿ. ಪ್ರಾಥಮಿಕ ಶಾಲೆ ವೀರಮಂಗಲ ಪುತ್ತೂರು), ಶ್ರೀಧರ ಗೌಡ ಕೆ( ಸ.ಹಿ.ಪ್ರಾ.ಶಾಲೆ ದೇವಚಳ್ಳ-ಸುಳ್ಯ).
*ಪ್ರೌಢ ಶಾಲಾ ವಿಭಾಗ: ವಿಲ್ಮಾ ಪಿ. ಲೋಬೊ (ಲೇಡಿಹಿಲ್ ವಿಕ್ಟೋರಿಯಾ ಪ್ರೌಢ ಶಾಲೆ-ಮಂಗಳೂರು ಉತ್ತರ), ದುರ್ಗಾಲತಾ (ಸ.ಶಿ, ಸರಕಾರಿ ಪ್ರೌಢಶಾಲೆ ಪೆರ್ಮನ್ನೂರು -ಮಂಗಳೂರು ದಕ್ಷಿಣ), ರತ್ನಾವತಿ ಆಚಾರ್.ಕೆ (ಸ.ಶಿ, ಸರಕಾರಿ ಪ್ರೌಢ ಶಾಲೆ ಪ್ರಾಂತ್ಯ-ಮೂಡಬಿದ್ರೆ), ಆದಂ (ಸ.ಶಿ. ಸರಕಾರಿ ಪ್ರೌಢ ಶಾಲೆ ಸರಪಾಡಿ-ಬಂಟ್ವಾಳ ), ವಿಜಯಕುಮಾರ್.ಎಂ(ಸರಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ-ಬೆಳ್ತಂಗಡಿ ), ಮೋಹನ್ ಎ.(ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಎಣ್ಮೂರು -ಸುಳ್ಯ)