×
Ad

ಸುಳ್ಯ: ಪಂಬೆತ್ತಾಡಿಯ ಯುವಕ ಬ್ಯಾಂಕಾಕ್‍ನಲ್ಲಿ ಮೃತ್ಯು

Update: 2025-03-17 21:52 IST

ಲಿಖಿನ್

ಸುಳ್ಯ: ಈಜಿಪ್ಟ್‌ ನಲ್ಲಿ ಶಿಪ್‍ನಲ್ಲಿ ಉದ್ಯೋಗಕ್ಕೆ ನೇಮಕವಾಗಿ ತೆರಳಿದ್ದ ಸುಳ್ಯದ ಪಂಬೆತ್ತಾಡಿಯ ಯುವಕ ಬ್ಯಾಂಕಾಕ್‍ನಲ್ಲಿ ಮೃತ ಪಟ್ಟ ಘಟನೆ ನಡೆದಿದೆ.

ಪಂಬೆತ್ತಾಡಿ ನಿವೃತ್ತ ಯೋಧ ದಿ. ಶಿವರಾಮ ಗೌಡರ ಪುತ್ರ ಲಿಖಿನ್(26) ಮೃತಪಟ್ಟ ಯುವಕ. ಈಜಿಪ್ಟ್‌ ನಲ್ಲಿ ಶಿಪ್‍ನಲ್ಲಿ ಉದ್ಯೋಗಕ್ಕೆ ನೇಮಕ ಗೊಂಡು ಅಲ್ಲಿಗೆ ತೆರಳಲು ವಿಮಾನ ಪ್ರಯಾಣಕ್ಕಾಗಿ ಬ್ಯಾಂಕಾಕ್‍ನಲ್ಲಿ ರೂಮ್‍ವೊಂದನ್ನು ಮಾಡಿ ತಂಗಿದ್ದರು. ಅಲ್ಲಿ ಅವರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತರಿಗೆ ತಾಯಿ, ಸಹೋದರ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News