ಮಂಗಳೂರು - ಬೆಂಗಳೂರು ವಂದೇ ಭಾರತ್ ರೈಲು ಆರಂಭಿಸಲು ಕೇಂದ್ರ ರೇಲ್ವೆ ಸಚಿವರಿಗೆ ದಿನೇಶ್ ಗುಂಡೂರಾವ್ ಮನವಿ
ಮಂಗಳೂರು, ಡಿ.24: ಮಂಗಳೂರು ಪಟ್ಟಣ ವಿದ್ಯಾಸಂಸ್ಥೆಗಳು, ಉದ್ಯಮಿಗಳಿಂದ ಕೂಡಿದ ಸಿಟಿಯಾಗಿದ್ದು ಬೆಂಗಳೂರು ಮತ್ತು ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಆರಂಭಿಸಿಸುವಂತೆ ಕೇಂದ್ರ ರೇಲ್ವೆ ಸಚಿವರಿಗೆ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದಿರುವ ದಿನೇಶ್ ಗುಂಡೂ ರಾವ್ ಅವರು ಬೆಂಗಳೂರಿನ ನಂತರ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಮಂಗಳೂರು ಸಹ ಮುಂಚೂಣಿಯಲ್ಲಿದ್ದು ಅತ್ಯುತ್ತಮ ಆಸ್ಪತ್ರೆಗಳು, ವಿದ್ಯಾ ಸಂಸ್ಥೆಗಳು, ಹಲವಾರು ಉದ್ಯಮಗಳು ಇಲ್ಲಿವೆೆ. ವಂದೇ ಭಾರತ್ ಪ್ರಾರಂಭಿಸಿದರೆ ಜನರಿಗೆ ಹೆಚ್ಚು ಪ್ರಯೋಜನವಗಲಿದೆ ಹಾಗೂ ಉದ್ಯಮಗಳ ಬೆಳವಣಿಗೆಗೆ ಅನುಕೂಲವಾಗಲಿದೆ. ಹಲವಾರು ಉದ್ಯಮಿಗಳು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಲು ಇದು ಸಹಾಯಕವಾಗಲಿದೆ. ದಿನಕ್ಕೆ 3 ವಂದೇ ಭಾರತ್ ರೈಲು ಪ್ರಾರಂಭಿಸಬೇಕೆಂದು ಕರ್ನಾಟಕ ಸರ್ಕಾರದ ಪರವಾಗಿ ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ಸಚಿವ ಗುಂಡೂ ರಾವ್ ಹೇಳಿದ್ದಾರೆ.