×
Ad

ಹತ್ಯೆಗೀಡಾದ ರಹೀಮ್ ಮನೆಗೆ ಮಿತ್ತಬೈಲ್ ಕೇಂದ್ರ ಜಮಾಅತ್ ನಿಯೋಗ ಭೇಟಿ

Update: 2025-06-01 22:00 IST

ಬಂಟ್ವಾಳ : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹ್ಮಾನ್ ಅವರ ಮನೆಗೆ ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯ ನಿಯೋಗ ಭೇಟಿ ನೀಡಿದರು.

ಈ ವೇಳೆ ಮೃತರಿಗೆ ಪ್ರಾರ್ಥನೆ ಸಲ್ಲಿಸಿ, ಕುಟುಂಬಿಕರಿಗೆ ಸಾಂತ್ವನ ಹೇಳಿದರು. ನಿಮ್ಮ ಸಂಕಷ್ಟದ ಸಮಯದಲ್ಲಿ ಮಿತ್ತಬೈಲ್ ಜಮಾತ್ ನಿಮ್ಮೊಂದಿಗೆ ಸದಾ ಇದೆ ಎಂಬ ಭರವಸೆ ನೀಡಿದರು.

ಈ ಸಂದರ್ಭ ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಅದ್ದೆಡಿ, ಖತೀಬ್ ಎಂ.ಕೆ. ಅಬ್ಬಾಸ್ ಫೈಝಿ ಪುತ್ತಿಗೆ, ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ ಪೈವಳಿಕೆ, ಪ್ರಧಾನ ಕಾರ್ಯ ದರ್ಶಿ ಅಕ್ಬರ್ ಆಲಿ ಪೊನ್ನೋಡಿ , ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಉಪಾಧ್ಯಕ್ಷ ಸೈಯ್ಯದ್ ಫಲುಳ್ ತಂಙಳ್, ಕಾರ್ಯದರ್ಶಿಗಳಾದ ಅಶ್ರಫ್ ಶಾಂತಿಅಂಗಡಿ, ಇಕ್ಬಾಲ್ ನಂದರಬೆಟ್ಟು, ಸದಸ್ಯರುಗಳಾದ ಶಾಹುಲ್ ಹಮೀದ್ ಪರ್ಲಿಯ ಅಝೀಝ್ ತಾಳಿಪಡ್ಪು, ಇಬ್ರಾಹಿಂ ಕೊಡಂಗೆ, ಬಷೀರ್ ಮಜಲ್ ಹನೀಫ್ ಶಾಂತಿ ಅಂಗಡಿ, ಹಾಮದ್ ಬಾವ ನಂದರಬೆಟ್ಟು ಹಾಗು ಅಶ್ಫಾಕ್ ಫೈಝಿ ನಂದಾವರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News