×
Ad

ಬೇಡಿಕೆ ಈಡೇರದಿದ್ದಲ್ಲಿ ಮುಷ್ಕರ: ಮಂಗಳೂರು ಲಾರಿ ಯೂನಿಯನ್

Update: 2023-09-16 19:14 IST

ಮಂಗಳೂರು, ಸೆ.16: ಲಾರಿ ಮಾಲಕರು ಎದುರಿಸುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ದ.ಕ. ಜಿಲ್ಲಾ ಲಾರಿ ಮಾಲಕರ ಸಂಘ (ರಿ)ದ ಪದಾಧಿಕಾರಿಗಳು ಶನಿವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸರಕಾರ ನಿಗದಿಪಡಿಸಿದ ಬಾಡಿಗೆ ದರ ನೀಡುವಂತೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಾರಿಗೆ ಅಧಿಕಾರಿ ಗಳ ಸಭೆ ನಡೆಸುವಂತೆ ಕೋರಲಾಯಿತು. ವಾರದೊಳಗೆ ಬಾಡಿಗೆ ದರ ನಿಗದಿಪಡಿಸದೆ ಇದ್ದಲ್ಲಿ ಕಲ್ಲಿದ್ದಲು ಸೇರಿದಂತೆ ಇತರ ಎಲ್ಲ ಸರಕು ಸಾಗಾಣಿಕೆಯನ್ನು ಸ್ವಯಂಪ್ರೇರಿತ ಮುಷ್ಕರ ಮಾಡಲಿದ್ದೇವೆ ಎಂದು ಲಾರಿ ಮಾಲಕರು ಜಿಲ್ಲಾಧಿಕಾರಿಯ ಗಮನ ಸೆಳೆದರು.

ಈ ಸಂದರ್ಭ ಗೌರವಾಧ್ಯಕ್ಷ ಸುಜಿತ್ ಆಳ್ವ, ಅಧ್ಯಕ್ಷ ಸುಶಾಂತ್ ಶೆಟ್ಟಿ, ಉಪಾಧ್ಯಕ್ಷ ನಿಸಾರ್ ಅಹ್ಮದ್ ನೆಲ್ಯಾಡಿ, ಜೊತೆ ಕಾರ್ಯದರ್ಶಿ ಹಾರಿಸ್ ಹೊಸ್ಮಾರ್, ಇಲ್ಯಾಸ್ ಮಿಸ್ಬಾ, ಖಾಸಿಮ್ ಜಾಸ್ಮೀನ್, ಸಾದಿಕ್ ಐಡಿಯಲ್, ಶಾಹಿದ್ ಮಿಯಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News