×
Ad

ಈಸ್ಟರ್ ಸಂದರ್ಭ ವಾರಾಂತ್ಯವನ್ನು ಕೆಲಸದ ದಿನಗಳೆಂದು ಮಣಿಪುರ ಸರಕಾರದ ಆದೇಶದ ವಿರುದ್ಧ ಆಕ್ರೋಶ

Update: 2024-03-28 22:11 IST

Manipur Raj Bhavan | Photo: X 

ಇಂಫಾಲ : ವಾರಾಂತ್ಯದ ದಿನಗಳಾದ ಮಾ.30 ಮತ್ತು 31ನ್ನು ಸರಕಾರಿ ಕಚೇರಿಗಳು, ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು,ಕಾರ್ಪೊರೇಷನ್ ಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಸೊಸೈಟಿಗಳಿಗೆ ಕೆಲಸದ ದಿನಗಳು ಎಂದು ಘೋಷಿಸಿ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರು ಆದೇಶವನ್ನು ಹೊರಡಿಸಿದ್ದಾರೆ. ಈಸ್ಟರ್ ಹಬ್ಬವನ್ನೂ ಇದೇ ಸಂದರ್ಭದಲ್ಲಿ ಆಚರಿಸಲಾಗುತ್ತಿದ್ದು, ಸರಕಾರದ ಆದೇಶಕ್ಕೆ ಜನಾಂಗೀಯ ಸಂಘರ್ಷದಿಂದ ತತ್ತರಿಸಿರುವ ರಾಜ್ಯದ ಬುಡಕಟ್ಟು ಗುಂಪುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

‘ಸರಕಾರದ ಆದೇಶವು ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಲಿದೆ. ಮಣಿಪುರದಲ್ಲಿ ಅನೇಕ ಕ್ರೈಸ್ತರಿದ್ದಾರೆ. ರವಿವಾರ ವಿರಾಮದ ದಿನವಾಗಿದ್ದು , ನಾವು ಈಸ್ಟರ್ ಆಚರಿಸಬೇಕಿದೆ ’ ಎಂದು ಬುಡಕಟ್ಟು ಗುಂಪುಗಳ ಒಕ್ಕೂಟ ಇಂಡಿಜಿಯಸ್ ಟ್ರೈಬಲ್ ಲೀಡರ್ಸ್ ಫೋರಮ್ನ ವಕ್ತಾರ ಗಿಂಜಾ ವುಯಲ್ಝಾಂಗ್ ತಿಳಿಸಿದರು.

ನಾಗಾ ವಿದ್ಯಾರ್ಥಿಗುಂಪುಗಳ ಒಕ್ಕೂಟ ಪೌಮೈ ನಾಗಾ ಸಿಡೌಮೈ ಮಿ ಹೇಳಿಕೆಯೊಂದರಲ್ಲಿ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಸರಕಾರವನ್ನು ಕೋರಿದೆ.

2011ರ ಜನಗಣತಿಯಂತೆ ಮಣಿಪುರದಲ್ಲಿ 28 ಲಕ್ಷ ಕ್ರೈಸ್ತರಿದ್ದು,ರಾಜ್ಯದ ಜನಸಂಖ್ಯೆಯಲ್ಲಿ ಶೇ.40.1ರಷ್ಟು ಪಾಲು ಹೊಂದಿದ್ದಾರೆ. ಅವರು ಕುಕಿಗಳು,ರೆ ಮತ್ತು ನಾಗಾಗಳಂತಹ ಬುಡಕಟ್ಟುಗಳು ಸಮುದಾಯಗಳಿಗೆ ಸೇರಿದ್ದಾರೆ.

2023-24ನೇ ವಿತ್ತವರ್ಷವು ಅಂತ್ಯಗೊಳ್ಳುತ್ತಿರುವುದರಿಂದ ಮಾ.30 ಮತ್ತು 31ರಂದು ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯಪಾಲರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News