×
Ad

ತಮಿಳುನಾಡು| ವಿಧಾನಸಭಾ ಕಲಾಪಕ್ಕೆ ಅಡಚಣೆ: ಎಐಎಡಿಎಂಕೆ ಶಾಸಕರನ್ನು ಸದನದಿಂದ ಅಮಾನತುಗೊಳಿಸಿದ ಸ್ಪೀಕರ್

Update: 2024-06-26 13:12 IST

PC : thehindu.com

ಚೆನ್ನೈ: ವಿಧಾನಸಭಾ ಕಲಾಪಕ್ಕೆ ಅಡಚಣೆಗೊಳಿಸಿದ ಆರೋಪದಲ್ಲಿ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ ಹಲವು ಎಐಎಡಿಎಂಕೆ ಶಾಸಕರನ್ನು ವಿಧಾನಸಭಾ ಅಧಿವೇಶನ ಮುಕ್ತಾಯಗೊಳ್ಳುವವರೆಗೂ ಅಮಾನತುಗೊಳಿಸಲಾಗಿದೆ.

ಈ ಕುರಿತು ತಮಿಳುನಾಡು ವಿಧಾನಸಭೆಯಲ್ಲಿ ಗೊತ್ತುವಳಿಯನ್ನು ಅಂಗೀಕರಿಸಿದ ನಂತರ ಈ ಅಮಾನತು ನಿರ್ಣಯವನ್ನು ಕೈಗೊಳ್ಳಲಾಗಿದೆ.

ಕಲ್ಲಿಕುರಿಚಿ ಕಳ್ಳ ಭಟ್ಟಿ ದುರಂತದ ಕುರಿತು ಮುಖ್ಯಮಂತ್ರಿ ಎಂ.ಕೆ‌.ಸ್ಟಾಲಿನ್ ಹಾಗೂ ವಿರೋಧ ಪಕ್ಷಗಳ ನಾಯಕ ಪಳನಿಸ್ವಾಮಿ ನಡುವೆ ಸದನದಲ್ಲಿ ವಾಗ್ಯುದ್ಧ ನಡೆದ ಬೆನ್ನಿಗೇ ಈ ಅಮಾನತು ಪ್ರಕಟಣೆ ಹೊರ ಬಿದ್ದಿದೆ.

ವಿಧಾನಸಭಾ ಕಲಾಪಕ್ಕೆ ಅಡ್ಡಿಪಡಿಸಿದ ಎಐಎಡಿಎಂಕೆ ಶಾಸಕರನ್ನು ಸದನದಿಂದ ತೆರವುಗೊಳಿಸುವಂತೆ ವಿಧಾನಸಭಾಧ್ಯಕ್ಷ ಎಂ.ಅಪ್ಪವು ಆದೇಶಿಸಿದರು. ಇದಕ್ಕೂ ಮುನ್ನ ಪ್ರಶ್ನೋತ್ತರ ಕಲಾಪವನ್ನು ಮುಂದೂಡಬೇಕು ಎಂದು ಆಗ್ರಹಿಸಿದ ಎಐಎಡಿಎಂಕೆ ಶಾಸಕರು, ಅಧಿವೇಶನದುದ್ದಕ್ಕೂ ಕಳ್ಳ ಭಟ್ಟಿ ದುರಂತದ ವಿರುದ್ಧ ಘೋಷಣೆಗಳನ್ನು ಕೂಗಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News