ರಾಮ ಮಂದಿರದಿಂದ ಬಡವರಿಗೆ ಪ್ರತಿಹೊತ್ತಿನ ಊಟ ಸಿಗುತ್ತದೆಯೇ? ಮೋಹನ್ ಭಾಗ್ವತ್ ಗೆ ವಿದ್ಯಾರ್ಥಿಗಳ ಪ್ರಶ್ನೆ!
Update: 2016-01-30 21:38 IST
ಮುಂಬೈ , ಜ 3೦ :
ಪ್ರಶ್ನೆ : ರಾಮ ಮಂದಿರ ನಿರ್ಮಾಣವಾದರೆ ದೇಶದ ಬಡವರಿಗೆ ಪ್ರತಿಹೊತ್ತಿನ ಊಟ ಸಿಗುತ್ತದೆಯೇ ?
ಉತ್ತರ : ಈಗ ರಾಮ ಮಂದಿರ ನಿರ್ಮಾಣವಾಗದೆ ಇದ್ದಾಗ ಅವರಿಗೆ ಸರಿಯಾಗಿ ಅವರ ರೊಟ್ಟಿ ಸಿಗುತ್ತಿದೆಯೇ ?
ಮಹಾರಾಷ್ಟ್ರ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿತ ವಿದ್ಯಾರ್ಥಿ ಸಂಸತ್ತಿನಲ್ಲಿ ಕೇಳಿ ಬಂದ ಪ್ರಶ್ನೋತ್ತರವಿದು. ಪ್ರಶ್ನೆ ಕೇಳಿದವರು ವಿದ್ಯಾರ್ಥಿಗಳು , ಕೇಳಿದ್ದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಅವರಿಗೆ. ಅದಕ್ಕವರು ಪ್ರತಿಪ್ರಶ್ನೆಯನ್ನೇ ಮುಂದಿಟ್ಟರು !
ಆರೆಸ್ಸೆಸ್ ಭಾರತದ ಸಂವಿಧಾನವನ್ನು ವಿರೋಧಿಸುವುದಿಲ್ಲ. ಈ ದೇಶದಲ್ಲಿ ಸಾಮಾಜಿಕ ತಾರತಮ್ಯ ಇರುವವರೆಗೆ ಮೀಸಲಾತಿ ಇರಬೇಕು. ಆದರೆ ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನ ಗೊಳಿಸಬೇಕು ಎಂದು ಅವರು ಹೇಳಿದರು.
ಧರ್ಮಾಧಾರಿತ ರಾಜಕೀಯದ ಬಗ್ಗೆ ಕೇಳಿದ್ದಕ್ಕೆ ಇದು ನನಗೆ ಸಂಬಂಧಪಟ್ಟ ಪ್ರಶ್ನೆಯಲ್ಲ, ಇದನ್ನು ಸಂಬಂಧಪಟ್ಟವರಿಗೆ ಕೇಳಿ ಎಂದು ಭಾಗ್ವತ್ ಜಾರಿಕೊಂಡರು.