ಬಲಿಯಾ;ಯಶವಂತ,ಶತ್ರುಘ್ನ ಉಚ್ಚಾಟನೆಗೆ ಬಿಜೆಪಿ ಸಂಸದನ ಆಗ್ರಹ

Update: 2016-01-31 14:45 GMT

ಬಲಿಯಾ,ಜ.31: ತಮಗೆ ಸಚಿವ ಹುದ್ದೆಗಳನ್ನು ನೀಡದ ಹಿನ್ನೆಲೆಯಲ್ಲಿ ಸರಕಾರ ಮತ್ತು ಪಕ್ಷದ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿರುವುದಕ್ಕಾಗಿ ಪಕ್ಷದ ನಾಯಕರಾದ ಯಶವಂತ್ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಅವರನ್ನು ಉಚ್ಚಾಟಿಸಬೇಕೆಂದು ಬಿಜೆಪಿಯ ಸಲೇಮಪುರ(ಉ.ಪ್ರ) ಸಂಸದ ರವೀಂದ್ರ ಕುಷ್ವಾಹ್ ಅವರು ರವಿವಾರ ಇಲ್ಲಿ ಆಗ್ರಹಿಸಿದರು.
  ತನ್ನ ಪುತ್ರ ಜಯಂತ್ ಸಿನ್ಹಾ ಅವರನ್ನು ಕೇಂದ್ರ ಸಹಾಯಕ ವಿತ್ತ ಸಚಿವರನ್ನಾಗಿ ಮಾಡಿರುವುದು ಯಶವಂತ್ ಸಿನ್ಹಾ ಅವರಿಗೆ ತೃಪ್ತಿಯನ್ನುಂಟು ಮಾಡಿಲ್ಲವೇನೋ ಎಂದು ಅವರು ಕುಟುಕಿದರು.
 
ಪಕ್ಷದ ಹಿರಿಯ ನಾಯಕ ಶತ್ರುಘ್ನ ಸಿನ್ಹಾ ಅವರ ವಿರುದ್ಧವೂ ದಾಳಿನಡೆಸಿದ ಕುಷ್ವಾಹ್,ಬಿಹಾರ್ ಚುನಾವಣೆ ನಡೆದಾಗಿನಿಂದಲೂ ಅವರು ‘‘ಆತ್ಮಘಾತುಕ’’ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ತಮಗೆ ಸಚಿವ ಹುದ್ದೆ ಸಿಕ್ಕಿಲ್ಲವೆಂದು ಹತಾಶರಾಗಿರುವ ಮತ್ತು ಸರಕಾರ ಹಾಗೂ ಪಕ್ಷದ ವಿರುದ್ಧ ನಿರಾಧಾರ ಹೇಳಿಕೆಗಳನ್ನು ನೀಡುತ್ತಿರುವ ಈ ಇಬ್ಬರೂ ನಾಯಕರನ್ನು ಯಾವುದೇ ವಿಳಂಬವನ್ನು ಮಾಡದೆ ಪಕ್ಷದಿಂದ ಉಚ್ಚಾಟಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News