ಪ್ರೇಮಿಗಳಿಬ್ಬರು ವಿರಹದ ಭೀತಿಯಲ್ಲಿ ಇಲಿಪಾಷಾಣ ಸೇವಿಸಿದರು! ಕೈ ನರಗಳನ್ನು ಕತ್ತರಿಸಿದರು!

Update: 2016-02-21 10:53 GMT

ತಿರುವನಂತಪುರಂ: ಪ್ರಣಯದ ವಿರಹವನ್ನು ಸಹಿಸಲಾಗದೆ ಇಲಿಪಾಷಾಣ ಸೇವಿಸಿದ ಬಳಿಕ ಕೈ ನರಗಳನ್ನು ಕತ್ತರಿಸಿದ ಜೋಡಿಗಳಿಬ್ಬರು ರಕ್ತ ಒಸರಿದಾಗ 108 ಆ್ಯಂಬುಲೆನ್ಸ್ ಕರೆ ಮಾಡಿ ತಂಗಿದ್ದ ಲಾಡ್ಜ್‌ನಿಂದ ಆಸ್ಪತ್ರೆ ಸೇರಿದ ಘಟನೆ ವರಿದಿಯಾಗಿದೆ. 

ಕೊಟ್ಟಾರಕರ ಎಂಬಲ್ಲಿನ ಯುವಕ ಹಾಗೂ ಆತನ ಪ್ರೇಯಸಿ ಇಲಿಪಾಷಾಣ ತಿಂದು ಇಲ್ಲಿನ ಶಂಕಮುಖ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶ್ರಮಿಸಿದ ಘಟನೆ 

ಮೊನ್ನೆ ನಡೆದಿದ್ದು, ವಲಿಯತ್ತುರ ಪೊಲೀಸರು ಕೇಸು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಯುವಕ ಅವಿವಾಹಿತನಾಗಿದ್ದ. ಯುವತಿ ಮದುವೆಯಾಗಿ ಐದು ವಯಸ್ಸಿನ ಮಗು ಹೊಂದಿದ್ದಾಳೆ. ಬಹುದಿನಗಳಿಂದ ಇವರಿಬ್ಬರು ಪ್ರೇಮಿಸುತ್ತಿದ್ದರೆನ್ನಲಾಗಿದೆ.

ಯುವತಿಯ ಗಂಡ ವಿದೇಶದಲ್ಲಿ ಉದ್ಯೋಗದಲ್ಲಿದ್ದಾನೆ. ಪತ್ನಿ ಪರಪುರಷನೊಂದಿಗೆ ಪ್ರಣಯ ಸಂಬಂಧವನ್ನು ಇರಿಸಿಕೊಂಡಿದ್ದು ಅವನು ಮತ್ತು 

ಮನೆಯವರು ಅರಿತಾಗ ಕುಟುಂಬದೊಳಗೆ ಸ್ಫೋಟವಾಗಿತ್ತು. ಈ ವಿಷಯ ಯುವತಿಯ ಪ್ರಿಯಕರನಿಗೂ ತಿಳಿದಾಗ ಆತನೂ ಗಲ್ಫ್ ಉದ್ಯೋಗಿಯಾಗಿದ್ದ ಆತ ಊರಿಗೆ ಮರಳಿದ್ದ. ಆನ್‌ಲೈನ್ ಮುಖಾಂತರ ಲಾಡ್ಜ್ ಬುಕ್ ಮಾಡಿ ಯುವತಿಯನ್ನು ಅಲ್ಲಿಗೆ ಕರೆಸಿಕೊಂಡು ಅವರಿಬ್ಬರೂ ಜೊತೆಯಾಗಿ ಆತ್ಮಹತ್ಯೆಗೆ ಶ್ರಮಿಸಿದ್ದರು.

ಪ್ರೇಮ ಸಂಬಂಧವನ್ನು ಹೆಚ್ಚು ದಿನಗಳವರೆಗೆ ಕದ್ದು ಮುಚ್ಚಿ ಮುಂದುವರಿಸಲಾಗದೆಂದು ಮನಗಂಡ ಅವರಿಬ್ಬರೂ ಜೀವ ಕಳಕೊಳ್ಳಲು ಬಯಸಿದ್ದರು. ಲಾಡ್ಜ್‌ನಲ್ಲಿ ಇಲಿಪಾಷಾಣ ಸೇವಿಸಿದ ನಂತರ ಕೈಗಳ ನರವನ್ನು ಕತ್ತರಿಸಿದ್ದರು. ರಕ್ತ ಕೋಡಿಯಾಗಿ ಹರಿದು ಹೋಗಲಾರಂಭಿಸಿದಾಗ ಗೃಹಿಣಿಯ ಪ್ರಿಯತಮ ಹೌಹಾರಿದ್ದ. ತಕ್ಷಣ 108 ಆ್ಯಂಬುಲೆನ್ಸ್‌ಗೆ ಫೋನ್ ಮಾಡಿದ್ದ. ಲಾಡ್ಜ್ ಬಳಿ ಆ್ಯಂಬುಲೆನ್ಸ್ ಬಂದು ನಿಂತ ನಂತರವೇ ಲಾಡ್ಜ್‌ನ ಕೆಲಸಗಾರರಿಗೂ ಆತ್ಮಹತ್ಯೆ ಯತ್ನದ ವಿಷಯ ತಿಳಿದಿತ್ತು. ಆ ಬಳಿಕ ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. 

ಲಾಡ್ಜ್ ರೂಮ್‌ನಿಂದ ಇಬ್ಬರ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡರೂ ಪಾಸ್‌ವರ್ಡ್ ಲಾಕ್ ಇದ್ದಿದ್ದರಿಂದ ಸೈಬರ್ ಸೆಲ್‌ಗೆ ಅದನ್ನು ಕಳುಹಿಸಲಾಗಿದೆ. ವಿಷಯ ತಿಳಿದು ಇಬ್ಬರ ಬಂಧುಗಳು ಬಂದರೂ ಪೊಲೀಸರು ಆತ್ಮಹತ್ಯೆ ಪ್ರಯತ್ನಕ್ಕಾಗಿ ಇಬ್ಬರ ಮೇಲೆಯೂ ದೂರು ದಾಖಲಿಸಿದ್ದಾರೆ. ಇಬ್ಬರ ಆರೋಗ್ಯ ಸ್ಥಿತಿ ಸುಧಾರಣೆಗೊಂಡೊಡನೆಯೇ ಕೋರ್ಟ್‌ಗೆ ಹಾಜರು ಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News