ಇದು ಸಾರ್ವಜನಿಕರ ಬಜೆಟ್ ಆಗಿದೆ: ಸಚಿವ ಸುರೇಶ್ ಪ್ರಭು
Update: 2016-02-25 12:23 IST
ಹೊಸದಿಲ್ಲಿ, ಫೆ.25: ಕುತೂಹಲ ಕೆರಳಿಸಿರುವ 2016-17ರ ಸಾಲಿನ ರೈಲ್ವೆ ಬಜೆಟ್ ನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಲೋಕಸಭೆಯಲ್ಲಿ ಇಂದು ಮಂಡಿಸಿದರು.
ಬಜೆಟ್ ರೈಲ್ವೇ ಪ್ರಯಾಣಿಕರಿಗೆ ಆಶಾದಾಯಕವಾಗಿದೆ. ಇದು ಸಾರ್ವಜನಿಕರ ಬಜೆಟ್ ಆಗಿದೆ. ಈ ಬಜೆಟ್ ತಯಾರಿಕೆಗೆ ಪ್ರಧಾನಿ ನರೆಂದ್ರ ಮೋದಿ ಸ್ಪೂರ್ತಿಯಾಗಿದ್ದಾರೆ ಎಂದು ಸಚಿವ ಸುರೇಶ್ ಪ್ರಭು ತಿಳಿಸಿದರು.
ರೈಲು ಭಾರತದ ಅರ್ಥ ವ್ಯವಸ್ಥೆಯ ಭಾಗವಾಗಿದೆ. ಪ್ರಸಕ್ತ ವರ್ಷ ರೈಲ್ವೆಯಲ್ಲಿ ಶೇ 92ರಷ್ಟು ಗುರಿ ಸಾಧಿಸುವ ಗುರಿ ಹೊಂದಲಾಗಿದೆ. ಎಂದು ಅವರು ಹೇಳಿದರು.