×
Ad

ಕೇಂದ್ರ ಬಜೆಟ್ ನ ಮುಖ್ಯಾಂಶಗಳು

Update: 2016-02-29 10:59 IST

ಹೊಸದಿಲ್ಲಿ, ಫೆ.29: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 2016-17ನೇ ಸಾಲಿನ ಕೇಂದ್ರ ಬಜೆಟ್ ನ್ನು ಲೋಕಸಭೆಯಲ್ಲಿ  ಇಂದು ಮಂಡಿಸಿದರು.

ಮೂರನೆ ಬಜೆಟ್ ನ್ನು 1 ಗಂಟೆ 45 ನಿಮಿಷಗಳಲ್ಲಿ ಜೇಟ್ಲಿ ಮಂಡಿಸಿದರು.

 ಬಜೆಟ್ ನಲ್ಲಿರುವ ಪ್ರಮುಖ  ಅಂಶಗಳು

ಬೆಲೆ ಏರಿಕೆ:ಕಾರು, ಸಿಗರೇಟ್‌, ಬ್ರಾಂಡೆಂಡ್‌  ಸಿದ್ದ ಉಡುಪು, ವಿಮಾನ ದರ, ಚಿನ್ನಾಭರಣ,ಇಂಡಸ್ಟ್ರೀಯಲ್‌  ಸೋಲಾರ್‌ ವಾಟರ್‌ ಹೀಟರ್‌,  ಲೀಗಲ್‌ ಸರ್ವಿಸಸ್‌, ಲಾಟರಿ ಟಿಕೆಟ್‌,  ಲೀಗಲ್‌ ಸರ್ವಿಸಸ್‌, ಬಾಡಿಗೆ ವಾಹನ,
ಬೆಲೆ ಇಳಿಕೆ : *ಪಾದರಕ್ಷೆ, ಸೋಲಾರ‍್ ಲ್ಯಾಂಪ್, ಡಿಜಿಟಲ್‌ ವಿಡಿಯೊ, ರೆಕಾರ್ಡರ್‌ ಮತ್ತು ಸಿಸಿ ಟಿವಿ , ಸ್ಯಾನಿಟರಿ ಪ್ಯಾಡ್ಸ್.

ಹೈಲೈಟ್ಸ್

*ಬರದ ನಿರ್ವಹಣೆಗೆ ದೀನದಯಾಲ್ ಮಿಷನ್

*ಮದ್ಯ ಬೆಲೆ ಏರಿಕೆ ಇಲ್ಲ

*ವಜ್ರ, ಚಿನ್ನಾಭರಣ ದುಬಾರಿ

*ಪೆಟ್ರೋಲ್ , ಡೀಸೆಲ್ ದರ ಏರಿಕೆ.

*ಹೊಸ ಕಂಪೆನಿಗಳ ಪ್ರಾರಂಭಕ್ಕೆ ಕೇಂದ್ರ ಸರಕಾರದ ಒತ್ತು.

*ಬೀಡಿ ಹೊರತುಪಡಿಸಿ ತಂಬಾಕು ಉತ್ಪನ್ನಗಳು ತುಟ್ಟಿ.

*ಐಷಾರಾಮಿ ಹಾಗೂ  ಸಣ್ಣ ಕಾರುಗಳ ದರ ಏರಿಕೆ.

*ಐಷಾರಾಮಿ ವಾಹನಗಳ ಖರೀದಿ ಮೇಲೆ ದುಬಾರಿ ತೆರಿಗೆ

*ಎಚ್ಆರ್ ಎ  ವಾರ್ಷಿಕ ಕಡಿತ 24,000 ರೂ. ನಿಂದ 60,000 ರೂ.

*ರಸ್ತೆ , ಹೈವೇ  ಅಭಿವೃದ್ಧಿಗೆ 55,000 ಕೋಟಿ ರೂ.

* ಮುದ್ರಾ ಬ್ಯಾಂಕ್  ಯೋಜನೆಯಲ್ಲಿ   1,80,000 ಕೋಟಿ ರೂ. ಕ್ರೆಡಿಟ್  ಟಾರ್ಗೆಟ್‌ 

*ಬಾಡಿಗೆ ಮನೆಯಲ್ಲಿ ವಾಸವಾಗಿರುವರಿಗೆ ಸಂತಸದ ಸುದ್ದಿ.  ಡಿಡಕ್ಷನ್  ಮಿತಿ 20,000 ರೂ.ಗಳಿಂದ 60 ಸಾವಿರ ರೂ.ತನಕ

*2.50 ಲಕ್ಷ ರೂ. ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ.

*ಸಣ್ಣ ತೆರಿಗೆದಾರರಿಗೆ ವಿನಾಯ್ತಿ ನೀಡಿದ ಮೋದಿ ಸರಕಾರ

*ವಷ೵ಕ್ಕೆ 5 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಇರುವವರಿಗೆ 3 ಸಾವಿರ ರೂ. ತೆರಿಗೆ ವಿನಾಯ್ತಿ.

  * ಅಂಚೆಕಚೇರಿಗಳಲ್ಲಿ ಎಟಿಎಂ, ಮೈಕ್ರೊ -ಎಟಿಎಂ ಹೆಚ್ಚಳಕ್ಕೆ ಸರಕಾರದ ಕ್ರಮ.

*ದೀನ ದಯಾಳ್ ಉಪಾಧ್ಯಾಯ , ಗುರುಗೋವಿಂದ ಸಿಂಗ್  ಜೀ ಜನ್ಮದಿನಾಚರಣೆಗೆ 100 ಕೋಟಿ ರೂ.

*50,000 ಕಿ.ಮೀ ರಾಜ್ಯ ಹೆದ್ದಾರಿಯನ್ನು ನ್ಯಾಶನಲ್ ಹೈವೇ ಆಗಿ ಮೇಲ್ದರ್ಜೆಗೇರಿಸಲು ಕ್ರಮ

*ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 97,000 ಕೋಟಿ ರೂ.

*ಹೊಸತಾಗಿ ಉದ್ಯೋಗಕ್ಕೆ ಸೇರಿದ ಉದ್ಯೋಗಿಗಳಿಗೆ ಮೊದಲ ಮೂರು ವರುಷ ಸರಕಾರದಿಂದ ಶೇ 8.33  ಇಪಿಎಫ್ ಹಣ ಪಾವತಿ.

*ಮುಂದಿನ 2 ವರುಷಗಳಲ್ಲಿ 62 ಹೊಸ ನವೋದಯ ವಿದ್ಯಾಲಯ ಪ್ರಾರಂಭ.

*ಮೂರು ವರುಷಗಳಲ್ಲಿ ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಯಡಿ 1 ಕೋಟಿ ರೂ. ತರಬೇತಿ ಯೋಜನೆ.

*ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಗೆ 1700 ಕೋಟಿ .ರೂ.

*ಉನ್ನತ ಶಿಕ್ಷಣಕ್ಕೆ 1000 ಕೋಟಿ ರೂ.

*ಸ್ವಚ್ಛ ಭಾರತ  ಅಭಿಯಾನಕ್ಕೆ 9,000. ಕೋಟಿ ರೂ.

*ಆರೋಗ್ಯ ರಕ್ಷಾ ಯೋಜನೆ - ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. .

*ಗ್ರಾಮೀಣ ಅಭಿವೃದ್ಧಿಗೆ 87, 765 ಕೋಟಿ ರೂ.

*ಗ್ರಾಮೀಣ ವಿದ್ಯುತ್:  8,500 ಕೋಟಿ ರೂ.

*ಗ್ರಾಮ ಪಂಚಾಯತ್ , ಮುನ್ಸಿಪಾಲಿಟಿ   ಅಭಿವೃದ್ಧಿಗೆ  2.87 ಲಕ್ಷ ಕೋಟಿ ರೂ.

*ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಗೆ 2016-17ರಲ್ಲಿ 5,500. ಕೋಟಿ ರೂ.

*ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 19,000 ಕೋಟಿ ರೂ.

*ನೀರಾವರಿಗೆ 20,000 ಕೋಟಿ ರೂ.

* ಮೂರು ವರುಷಗಳಲ್ಲಿ 5  ಲಕ್ಷ ಎಕ್ರೆ ಪ್ರದೇಶದಲ್ಲಿ ಸಾವಯವ ಕೃಷಿ

*ಕೃಷಿ: ಕೃಷಿಗೆ 35, 984 ಕೋಟಿ ರೂ. , ಐದು ವರುಷಗಳಲ್ಲಿ ಕೃಷಿಕರ   ಆದಾಯ ದ್ವಿಗುಣಗೊಳಿಸಲು ಕ್ರಮ.

*9 ಅಂಶಗಳ  ಆಧಾರದಲ್ಲಿ ಕೇಂದ್ರ ಬಜೆಟ್

*ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ  ಒತ್ತು

*19 ಸಾವಿರ ಕೋಟಿ ಕೋಟಿ ರೂ. ವೆಚ್ಚದಲ್ಲಿ ಗ್ರಾಮ ಸಡಕ್ ಯೋಜನೆ

* ರೈತರಿಗೆ ಪ್ರಧಾನ ಮಂತ್ರಿ ಫಸಲ್ ವಿಮಾ  ಯೋಜನೆ

*ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪೂರೈಕೆ

  *ಭಾರತದ  ಅರ್ಥ ವ್ಯವಸ್ಥೆ ಸ್ಥಿರವಾಗಿದೆ.

  *ಜಾಗತಿಕ   ಅರ್ಥ  ವ್ಯವಸ್ಥೆ ಕುಸಿದಿರುವ ವೇಳೆ ಬಜೆಟ್

ಹೈಲೈಟ್ಸ್

11:05: ಸಚಿವ ಜೇಟ್ಲಿ ಬಜೆಟ್  ಮಂಡನೆ ಶುರು.

11:00: ಲೋಕಸಭೆಯ  ಕಲಾಪ  ಆರಂಭ, ಸಚಿವ ಜೇಟ್ಲಿ ಬಜೆಟ್  ಮಂಡನೆ ಶುರು.

* ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯ. ಬಜೆಟ್ ಮಂಡನೆಗೆ ಅಂತಿಮ  ಕ್ಷಣದ ತಯಾರಿ.

* ಬಜೆಟ್ ಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ.

ಹೊಸದಿಲ್ಲಿ, ಫೆ.29:  ಬಹು ನಿರೀಕ್ಷಿತ 2016-17ನೆ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. , ಹಣಕಾಸು  ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ  11ಗಂಟೆಗೆ ಸಂಸತ್ತಿನಲ್ಲಿ ಬಜೆಟ್  ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News