×
Ad

ಕನ್ಹಯ್ಯ ಕುಮಾರ್‌ಗೆ ಮಧ್ಯಾಂತರ ಜಾಮೀನು ಮಂಜೂರು

Update: 2016-03-02 19:09 IST

ಹೊಸದಿಲ್ಲಿ, ಮಾ.2: ದೇಶದ್ರೋಹ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್‌  ಅವರಿಗೆ ದಿಲ್ಲಿ ನ್ಯಾಯಾಲಯವು ಇಂದು ಮಧ್ಯಂತರ  ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿಯ ವಿಚಾರಣೆ ದಿಲ್ಲಿ  ಹೈಕೋರ್ಟ್‌ನಲ್ಲಿ ಬುಧವಾರನಡೆಯಿತು. ಅವರಿಗೆ 6  ತಿಂಗಳುಗಳ ಕಾಲ ಮಧ್ಯಂತರ ಜಾಮೀನು ಲಭಿಸಿದೆ..
ಸೋಮವಾರ ಮೂರು ತಾಸು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಪ್ರತಿಭಾ ರಾಣಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದರು. ಜೆಎನ್‌ವಿವಿಯಲ್ಲಿ ಫೆ.9ರಂದು ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಕನ್ಹಯ್ಯ ಕುಮಾರ್‌ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಎರಡು ವಾರಗಳಿಂದ ತಿಹಾರ ಜೈಲಿನಲ್ಲಿರುವ ಕನ್ಹಯ್ಯ ಕುಮಾರ್‌ಗೆ ಕೊನೆಗೂ ಬಿಡುಗಡೆಯ ಭಾಗ್ಯ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News