3ನೇ ತರಗತಿ ಕಲಿಯದ ಕವಿಗೆ 5 ಪಿಎಚ್‌ಡಿ ಪ್ರಬಂಧಗಳು, ಪದ್ಮಶ್ರೀ ಗೌರವ

Update: 2016-03-30 11:03 GMT

ನವದೆಹಲಿ :ಆತ ಕಲಿತದ್ದು ಕೇವಲ ಮೂರನೇ ತರಗತಿಯ ತನಕ. ಆದರೆ ಅದಾಗಲೇಐದು ವಿದ್ವಾಂಸರ ಪಿಎಚ್‌ಡಿ ಪ್ರಬಂಧಗಳು ಈ ಒಡಿಶಾ ಮೂಲದ ಕವಿ ಹಾಗೂ ಲೇಖಕನಆಧರಿತವಾಗಿದೆ. ಈತ ಹೆಸರೇ ಹಲ್ಧರ್ ನಾಗ್ (66). ಸೋಮವಾರ ಈತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಹಸ್ತದಿಂದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ಪಡೆದ ಕ್ಷಣ ಅಪೂರ್ವ.

ಕೊಸ್ಲಿ ಭಾಷೆಯಲ್ಲಿ ಬರೆಯುವ ಈ ಕವಿ ತನ್ನ ಎಲ್ಲ ಕವಿತೆಗಳೂ ಹಾಗೂ 20 ಗ್ರಂಥಗಳ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲ. ಸಂಬಲ್ಪುರ ವಿಶ್ವವಿದ್ಯಾಲಯ ಈತನ ಬರಹಗಳ ಮಾಲಿಕೆಯನ್ನು ಗ್ರಂಥದ ರೂಪದಲ್ಲಿ ಹಲ್ಧರ್ ಗ್ರಂಥಬಲಿ-2ಪ್ರಟಿಸಲಿದ್ದು ಅದು ವಿಶ್ವವಿದ್ಯಾಲಯದ ಪಠ್ಯದ ಭಾಗವಾಗಲಿದೆ.

‘‘ಆತನಿಗೆ ಎಲ್ಲವೂ ನೆನಪಿದೆ. ಕೇವಲ ಕವಿತೆ ಯಾ ಪುಸ್ತಕದ ಹೆಸರು ಹೇಳಿದರಷ್ಟೇ ಸಾಕು. ಈಗ ಆತ ದಿನವೊಂದಕ್ಕೆ ಕನಿಷ್ಠ ಮೂರರಿಂದ ನಾಲ್ಕು ಕಾರ್ಯಕ್ರಮಗಳಲ್ಲಿ ಕವಿತಾವಾಚನ ನಡೆಸುತ್ತಾನೆ,’’ಎಂದು ಹಲ್ಧರ್‌ನ ಸಮೀಪವರ್ತಿಯೊಬ್ಬ ವಿವರಿಸುತ್ತಾನೆ. ‘‘ಯಾವತ್ತೂ ಚಪ್ಪಲಿ ಧರಿಸದ ಹಲ್ಧರ್ ಬಿಳಿ ಧೋತಿ ಹಾಗೂ ಮೇಲಂಗಿಯನ್ನು ಧರಿಸುತ್ತಾನೆ.

ಒಡಿಶಾದ ಬರ್ಗಹ್ ಜಿಲ್ಲೆಯ ಘೆನ್ಸ್ ಎಂಬಲ್ಲಿ ಬಡ ಕುಟುಂಬವೊಂದರಲ್ಲಿ 1950ರಲ್ಲಿಜನಿಸಿದ ಹಲ್ಧರ್ಕೇವಲ ಮೂರನೇ ತರಗತಿ ತನಕ ಕಲಿತಿದ್ದಾನೆ. ಆತ 10 ವರ್ಷದವನಿರುವಾಗಲೇ ಆತನ ತಂದೆ ತೀರಿ ಹೋಗಿದ್ದು ನಂತರ ಆತ ಶಾಲೆಗೆ ಹೋಗಿಲ್ಲ. ವಿಧವೆಯೊಬ್ಬಳ ಮಗನಾಗಿ ಬದುಕುವುದು ಆಗ ದುಸ್ತರವಾಗಿತ್ತು,’’ಎಂದು ಹಲ್ಧರ್ ನೆನೆಪಿಸುತ್ತಾನೆ. ಎರಡು ವರ್ಷಗಳ ನಂತರ ಸ್ಥಳೀಯ ಹೈಸ್ಕೂಲ್ ಒಂದರಲ್ಲಿ ಅಡುಗೆಯಾಳು ಕೆಲಸಕ್ಕೆ ಸೇರಿದ ಹಲ್ಧರ್ಆ ಕೆಲಸದಲ್ಲಿ ಸುಮಾರು16 ವರ್ಷವಿದ್ದು. ನಂತರ ಬ್ಯಾಂಕೊಂದರಿಂದ 1000 ಸಾಲ ಪಡೆದು ಸ್ಟೇಶನರಿ ಹಾಗೂ ತಿಂಡಿತಿನಿಸನ್ನು ಮಾರುವ ಸಣ್ಣಅಂಗಡಿಯೊಂದನ್ನು ತೆರೆದನು. ಈ ಸಂದರ್ಭದಲ್ಲಿ ತನ್ನ ಪ್ರಥಮ ಕವಿತೆ ‘ಧೋಡೋ ರ್ಗಛ್"(ಹಳೆಯ ಆಲದ ಮರ) ಆತನ ಲೇಖನಿಯಿಂದ 1990ರಲ್ಲಿ ಹೊರಹೊಮ್ಮಿತು. ಮ್ಯಾಗಜೀನ್ ಒಂದಕ್ಕೆ ತಾನು ಬರೆದ ನಾಲ್ಕು ಕವಿತೆಗಳನ್ನು ಪ್ರಕಟಣೆಗೆ ಕಳಿಸಿದಾಗ ಅವು ಪ್ರಕಟಗೊಳ್ಳಲು ಆಯ್ಕೆಯಾಗಿ ಮುಂದೆ ಇದು ಈ ಉದಯೋನ್ಮುಖ ಕವಿಗೆ ಪ್ರೇರಣೆಯಾಯಿತು.

ಕವಿತೆಯೊಂದು ನಿಜ ಜೀವನಕ್ಕೆ ಹೋಲಿಕೆಯಾಗಬೇಕು ಹಾಗೂ ಜನರಿಗೆ ಒಳ್ಳೆಯ ಸಂದೇಶ ನೀಡಬೇಕು ಎಂದು ಒಡಿಶಾದಲ್ಲಿ ಲೋಕ್ ಕಬಿ ರತ್ನ ಎಂದೇ ಜನಜನಿತರಾಗಿರುವಹಲ್ಧರ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News