ನಿನ್ನನ್ನು ಮುಗಿಸುತ್ತೇವೆ : ಚೋಟಾ ರಾಜನ್‌ಗೆ ಡಿ ಗ್ಯಾಂಗ್‌ನಿಂದ ಕೊಲೆ ಬೆದರಿಕೆ

Update: 2016-05-01 15:04 GMT

 ಹೊಸದಿಲ್ಲಿ, ಮೆ 1: ಇಂಡೋನೇಶಿಯದ ಬಾಲಿಯಿಂದ ಬಂಧಿಸಿ ಕರೆತರಲಾದ ಭೂಗತ ದೊರೆ ಚೋಟಾ ರಾಜನ್‌ನಿಗೆ ನಿರಂತರ ಕೊಲೆ ಬೆದರಿಕೆ ಬರುತ್ತಿದೆ. ದಿಲ್ಲಿಯ ಭಾರೀ ಭದ್ರತೆಯ ತಿಹಾರ್‌ಜೈಲಿನಲ್ಲಿರಿಸಲಾದ ಚೋಟಾ ರಾಜನ್‌ಗೆ ದಾವೂದ್ ಇಬ್ರಾಹೀಂ ಗ್ಯಾಂಗ್ ಮತ್ತೊಮ್ಮೆ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.

ಹಿಂದುಸ್ಥಾನ್ ಟೈಮ್ಸ್ ವರದಿ ಪ್ರಕಾರ ಚೋಟಾ ರಾಜನ್ ಫೋನ್‌ಗೆ ಒಂದು ಸಂದೇಶ ಕಳುಹಿಸಲಾಗಿದ್ದು ಆ ನಂಬರ್ ಮೂಲವನ್ನು ಪತ್ತೆಹಚ್ಚಿದಾಗ ದಾವೂದ್ ಇಬ್ರಾಹೀಂ ಗ್ಯಾಂಗ್‌ನ ಕಮಾಂಡರ್ ಚೋಟಾ ಶಕೀಲ್‌ನ ಮೊಬೈಲ್‌ನಿಂದ ಬಂದಿದೆ ಎಂದು ತಿಳಿದು ಬಂದಿದೆ.

ಚೋಟಾ ರಾಜನ್‌ಗೆ ಕೆಟ್ಟ ಪದ ಪ್ರಯೋಗಿಸಿ ಕೊಲೆ ಬೆದರಿಕೆ ಹಾಕಲಾಗಿದೆ.ತಿಹಾರ್ ಜೈಲಿನ ಹಿರಿಯ ವಕ್ತಾರರು ಚೋಟಾ ರಾಜನ್‌ನ ಭದ್ರತೆಯನ್ನು ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಬೆದರಿಕೆ ಚೋಟಾ ಶಕೀಲ್‌ನ ಕಡೆಯಿಂದ ಬಂದಿದೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News