×
Ad

ಪನಾಮಾ ಲೀಕ್ಸ್: ಕೇಂದ್ರ ಸರಕಾರ, ಸಿಬಿಐಗೆ ಸುಪ್ರೀಂ ಕೋರ್ಟ್‌‌ನ ನೋಟಿಸ್

Update: 2016-05-09 13:45 IST

ಹೊಸದಿಲ್ಲಿ, ಮೇ 9:  ವಿಶ್ವದ ಹಲವು ಮಂದಿ ಪ್ರಭಾವಿ ವ್ಯಕ್ತಿಗಳ ತೆರಿಗೆ ವಂಚಿಸಿ ಹಣ ಹೂಡಿಕೆಯ ಪನಾಮಾ ಪೇಪರ್ಸ್ ಪ್ರಕರಣವನ್ನು  ತನಿಖೆಗೆ ಸಿಬಿಐಗೆ ವಹಿಸುವ ವಿಚಾರದಲ್ಲಿ  ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ ಮತ್ತು ಸಿಬಿಐಗೆ  ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. 

ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಶಿವ ಕೀರ್ತಿ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ  ಪನಾಮ ಪೇಪರ್ಸ್‌ ಲೀಕ್ ಪ್ರಕರಣ ಸಂಬಂಧ  ತನ್ನ ನಿಲುವನ್ನು ತಿಳಿಸುವಂತೆ  ಕೇಂದ್ರ ಸರಕಾರ ಮತ್ತು  ಮತ್ತು ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ. 
 ಪನಾಮಾ ಪೇಪರ್ಸ್  ಪ್ರಕರಣವನ್ನು ತನಿಖೆಗೆ ಸಿಬಿಐಗೆ ವಹಿಸುವಂತೆ ಆಗ್ರಹಿಸಿ  ವಕೀಲ ಎಂ ಎಲ್ ಶರ್ಮಾ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಪನಾಮಾ ಹಗರಣದಲ್ಲಿ ಭಾರತದ ಬಿಗ್‌ ಬಿ  ಅಮಿತಾಭ್‌ ಬಚ್ಚನ್‌, ಅವರ ಸೊಸೆ ಐಶ್ವರ್ಯ ರೈ ಸೇರಿದಂತೆ 500 ಭಾರತೀಯರ ಹೆಸರು  ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ  ಈ ಬಗ್ಗೆ  ತನಿಖೆಗೆ  ತನಿಖಾ ಸಮಿತಿಯೊಂದನ್ನು ರಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News