ಕೇರಳದ ಖಜಾನೆ ಖಾಲಿಯಾಗಿಲ್ಲ: ಉಮ್ಮನ್ ಚಾಂಡಿ

Update: 2016-05-24 07:05 GMT

ತಿರುವನಂತಪುರಂ, ಮೇ 24: ಕೇರಳದ ಖಜಾನೆ ಖಾಲಿಯಾಗಿದೆ ಎಂದು ನಿಯೋಜಿತ ಹಣಕಾಸು ಸಚಿವ ಡಾ.ಥಾಮಸ್ ಐಸಾಕ್‌ರ ಟೀಕೆಗೆ ಉತ್ತರಿಸಿದ ಉಸ್ತುವಾರಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ರಾಜ್ಯದ ಖಜಾನೆ ಖಾಲಿಯಾಗಿಲ್ಲ ಎಂದು ಕೂಡಲೇ ಅವರಿಗೆ ಮನವರಿಕೆಯಾಗಲಿದೆ ಎಂದು ಹೇಳಿದ್ದಾರೆ. ಸಚಿವರಾಗಿ ಅಧಿಕಾರವಹಿಸಿಕೊಳ್ಳುವ ಮೊದಲು ಐಸಾಕ್ ಹೇಳಿಕೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ಮೇಲೆ ಅವರು ತನ್ನ ನಿಲುವನ್ನು ಬದಲಾಯಿಸಲಿದ್ದಾರೆ ಎಂದು ಪತ್ರಿಕೆಗಳು ಕೇಳಿದ ಪ್ರಶ್ನೆಗೆ ಚಾಂಡಿ ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News