×
Ad

ನಾಳೆ ಬಿಎಸ್ಪಿಯಿಂದ ಉತ್ತರ ಪ್ರದೇಶದಾದ್ಯಂತ ಬಿಜೆಪಿ ವಿರುದ್ಧ ಪ್ರತಿಭಟನೆ

Update: 2016-07-23 23:49 IST

ಆಗ್ರಾ, ಜು.23: ಪಕ್ಷದ ನಾಯಕಿ ಮಾಯಾವತಿ ವಿರುದ್ಧ ಬಿಜೆಪಿ ಮುಖಂಡ ದಯಾಶಂಕರ್ ಅವರು ಮಾಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ, ಈ ತಿಂಗಳ 25ರಂದು ಉತ್ತರ ಪ್ರದೇಶದಾದ್ಯಂತ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಬಹುಜನ ಸಮಾಜ ಪಕ್ಷ ನಿರ್ಧರಿಸಿದೆ.

ಬಿಎಸ್ಪಿವಿಭಾಗೀಯ ಸಂಚಾಲಕ ಸುನೀಲ್ ಚಿತೋರ್ ಈ ಬಗ್ಗೆ ಹೇಳಿಕೆ ನೀಡಿ, ಬಿಜೆಪಿ ಮುಖಂಡ ದಯಾಶಂಕರ್ ಅವರ ಹೇಳಿಕೆಗೆ ಬಿಜೆಪಿ ವಿಷಾದ ವ್ಯಕ್ತಪಡಿಸಿರುವುದು ನಾಚಿಕೆಗೇಡು. ದಲಿತ ವಿರೋಧಿ ಪಕ್ಷವಾದ ಬಿಜೆಪಿ ರಾಜ್ಯದಲ್ಲಿ ಕೋಮು ಹಾಗೂ ಜಾತಿ ಸಂಘರ್ಷವನ್ನು ತಂದಿಕ್ಕಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News