ಶಂಕರ್ ಚಿತ್ರದಲ್ಲಿ ಅಜಿತ್

Update: 2016-08-14 06:36 GMT

ಬಾಲಿ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸಿನಿಪ್ರಿಯರ ಚಿತ್ತ ಈಗ ರಜನಿಕಾಂತ್ ಅಭಿನಯದ ‘ಎಂದಿರನ್ 2.0’ ಚಿತ್ರದೆಡೆಗೆ ಹೊರಳಿದೆ. ಶಂಕರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆಯಾದರೂ, ಮುಂದಿನ ವರ್ಷವೇ ಆ ಚಿತ್ರ ಬಿಡುಗಡೆಯಾಗಲಿದೆ. ಆಕ್ಷಯ್ ಕುಮಾರ್ ಖಳನಾಯಕನಾಗಿ ನಟಿಸಿರುವ ಈ ಚಿತ್ರದ ಬಗ್ಗೆ ಸಿನೆಮಾ ಪ್ರೇಮಿಗಳ ನಿರೀಕ್ಷೆ ಗರಿಗೆದರಿದೆ. ಇದೇ ವೇಳೆ ‘ಎಂದಿರನ್ 2.0’ ಬಿಡುಗಡೆಯಾದ ನಂತರ ಶಂಕರ್ ಅವರು ತಲ ಅಜಿತ್ ನಾಯಕನಾಗಿರುವ ಚಿತ್ರವೊಂದನ್ನು ನಿರ್ಮಿಸಲು ಯೋಚಿಸುತ್ತಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಆ್ಯಕ್ಷನ್ ಪ್ರಧಾನ ಕಥಾವಸ್ತುವಿರುವ ಈ ಚಿತ್ರದ ಬಗ್ಗೆ ಅಜಿತ್ ಹಾಗೂ ಶಂಕರ್ ಈಗಾಗಲೇ ಮಾತುಕತೆ ಕೂಡಾ ನಡೆಸಿದ್ದಾರೆ. ಪ್ರಸ್ತುತ ಅಜಿತ್ ‘ತಲ 57’ ಚಿತ್ರದ ಶೂಟಿಂಗ್‌ನಲ್ಲಿ ಮಗ್ನರಾಗಿದ್ದಾರೆ. ಮುಂದಿನ ವರ್ಷದ ಏಪ್ರಿಲ್‌ನಲ್ಲಿ ತಲ 57 ತೆರೆಕಾಣಲಿದ್ದು, ಆ ಬಳಿಕ ಅವರು ಶಂಕರ್ ನಿರ್ದೇಶನದ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಅಜಿತ್ ಹಾಗೂ ಶಂಕರ್ ಕಾಂಬಿನೇಶನ್‌ನ ಈ ಚಿತ್ರ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವುದಂತೂ ಗ್ಯಾರಂಟಿ ಎಂದು ಚೆನ್ನೈನ ಸಿನೆಮಾ ಮಂದಿ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News