ಹೆಂಡತಿಯ ಶವವನ್ನು ಹೆಗಲಲ್ಲಿ ಹೊತ್ತ ಮಾಂಝಿಗೆ ಬಹ್ರೇನ್ ಪ್ರಧಾನಿ ನೆರವು
Update: 2016-08-28 15:23 GMT
ಮನಾಮ, ಆ. 28: ಆ್ಯಂಬುಲೆನ್ಸ್ಗೆ ನೀಡಲು ಹಣವಿಲ್ಲದೆ, ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಹೆಂಡತಿಯ ಶವವನ್ನು ಹೆಗಲಲ್ಲಿ ಹೊತ್ತುಕೊಂಡು ಮಗಳೊಂದಿಗೆ 10 ಕಿ.ಮೀ. ನಡೆದುಕೊಂಡು ಹೋದ ಗ್ರಾಮೀಣ ಒಡಿಶಾದ ನಿವಾಸಿ ದಾನ ಮಾಂಝಿಯ ಕತೆ ಇಡೀ ಜಗತ್ತಿನ ಅಂತಃಕರಣವನ್ನೇ ಕದಡಿದಂತಿದೆ.
ಈ ಸುದ್ದಿ ಕೇಳಿ ಮನ ಮಿಡಿದಿರುವ ಬಹ್ರೇನ್ನ ಪ್ರಧಾನಿ ಖಲೀಫ ಬಿನ್ ಸಲ್ಮಾನ್ ಅಲ್ ಖಲೀಫ ಮಾಂಝಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಕೇಳಿ ಪ್ರಧಾನಿ ಎಷ್ಟು ದುಃಖಿತರಾದರೆಂದರೆ, ಈ ವ್ಯಕ್ತಿಗೆ ತಾನು ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ್ದಾರೆ ಎಂದು ಬಹ್ರೇನ್ನ ದೈನಿಕ ‘ಗಲ್ಫ್ ಡೇಲಿ ನ್ಯೂಸ್’ನಲ್ಲಿ ಪ್ರಕಟಗೊಂಡ ವರದಿಯೊಂದು ತಿಳಿಸಿದೆ.
ಅವರ ಕಚೇರಿಯು ಬಹ್ರೇನ್ನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದು, ಮಾಂಝಿಗೆ ನೀಡಲು ಹಣ ನೀಡಿದ್ದಾರೆ ಎಂದು ಅದು ತಿಳಿಸಿದೆ.