ಸೆಕ್ಸ್ ಟೇಪ್ ಹಗರಣ : ಎಎಪಿ ಸಚಿವ ಔಟ್ !

Update: 2016-08-31 17:27 GMT

ಹೊಸದಿಲ್ಲಿ,ಆ.31: ದಿಲ್ಲಿಯ ಸಮಾಜ ಕಲ್ಯಾಣ ಸಚಿವ ಸಂದೀಪ ಕುಮಾರ್ ಅವರ ‘ಆಕ್ಷೇಪಾರ್ಹ ಸಿಡಿ’ಯೊಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಕೈಸೇರಿದೆ. ಸಿಡಿಯನ್ನು ಕಂಡು ಕೆಂಡಾಮಂಡಲರಾದ ಕೇಜ್ರಿವಾಲ್ ಸಂದೀಪ್ ಕುಮಾರ್ ಅವರನ್ನು ಸಚಿವ ಹುದ್ದೆಯಿಂದಲೇ ವಜಾಗೊಳಿಸಿದ್ದಾರೆ.
ಕೇಜ್ರಿವಾಲ್‌ಗೆ ಸಲ್ಲಿಸಲಾದ ಸಿಡಿಯಲ್ಲಿ ಸಂಜೀವ ಕುಮಾರ್ ಅವರು ಇಬ್ಬರು ಮಹಿಳೆಯರೊಂದಿಗೆ ಅಶ್ಲೀಲ ಭಂಗಿಯಲ್ಲಿರುವ ದೃಶ್ಯಗಳು ಮತ್ತು ಆಕ್ಷೇಪಾರ್ಹ ಚಿತ್ರಗಳಿವೆಯೆನ್ನಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
  
ದಿಲ್ಲಿಯ ರಸ್ತೆಗಳಿಂದ ಭಿಕ್ಷುಕರನ್ನು ತೆರವುಗೊಳಿಸುವ ಕುಮಾರ್ ಯೋಜನೆಯನ್ನು ಕಳಪೆಯಾಗಿ ರೂಪಿಸಲಾಗಿದ್ದು, ಅದನ್ನು ಕೈಬಿಡಲಾಗುತ್ತಿದೆ ಎಂದು ಕೇಜ್ರಿವಾಲ್ ಕಳೆದ ತಿಂಗಳು ಟ್ವೀಟಿಸಿದ್ದರು. ಭಿಕ್ಷುಕರನ್ನು ಸರಕಾರವು ನಡೆಸುತ್ತಿರುವ ಆಶ್ರಮಕ್ಕೆ ಎತ್ತಂಗಡಿ ಮಾಡಲು ಕುಮಾರ್ ಯೋಜಿಸಿದ್ದರು. ಆದರೆ ಈ ಯೋಜನೆಯಲ್ಲಿ ಪುನರ್ವಸತಿಯ ಯಾವುದೇ ಪ್ರಸ್ತಾಪವಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಆಕ್ಷೇಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News